ನವದೆಹಲಿ : ಅಕ್ರಮ ಹಣ ಪ್ರಕರಣ ಮಾಜಿ ಸಚಿವ ಡಿಕೆ ಶಿವಕುಮಾರ್ಗೆ ಉರುಳಾಗೋ ಎಲ್ಲಾ ಲಕ್ಷಣಗಳು ಕಾಣ್ತಿವೆ. ಯಾಕಂದ್ರೆ, ಬುಧವಾರ ಇಡಿ ಪರ ವಕೀಲರಾದ ನಟರಾಜ್ ಕೋರ್ಟ್ಗೆ ಬಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ವಿಚಾರಣೆಯನ್ನ ಇವತ್ತಿಗೆ ಮುಂದೂಡಲಾಯ್ತು. ಡಿಕೆಶಿ ಪರ ವಕೀಲರು, ಷರತ್ತು ಬದ್ಧ ಜಾಮೀನಿಗೆ ಮನವಿ ಮಾಡಿದ್ರೂ, ನ್ಯಾಯಮೂರ್ತಿ ಯಾವುದೇ ಮನವಿಯನ್ನ ಪುರಸ್ಕರಿಸಿಲ್ಲ.
ವೈದ್ಯರು ಪರೀಕ್ಷೆ ನಡೆಸಿದ ಬಳಿಕ ಡಿಕೆಶಿ, ಆಸ್ಪತ್ರೆಯಲ್ಲೇ ಇರಬೇಕಾ ಅಥವಾ ತಿಹಾರ್ ಜೈಲಿಗೆ ಹೋಗಬೇಕಾ ಅನ್ನೋದು ಇವತ್ತು ಗೊತ್ತಾಗಲಿದೆ. ಒಂದ್ವೇಳೆ ಜಾಮೀನು ಸಿಗದೇ ಇದ್ರೆ, ಇನ್ನೂ 12 ದಿನ ತಿಹಾರ್ ಜೈಲಿನಲ್ಲೇ ಡಿಕೆಶಿ ಇರಬೇಕಾಗುತ್ತೆ. ಈಗಾಗಲೇ ನ್ಯಾಯಾಲಯ ಡಿಕೆಶಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಈ ನಡುವೆ, ಇವತ್ತು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಕೂಡ ಇಡಿ ವಿಚಾರಣೆಗೆ ಹಾಜರಾಗಲಿದ್ದಾರೆ. ಇದರಿಂದಾಗಿ ಲಕ್ಷ್ಮೀ ಹೆಬ್ಭಾಳ್ಕರ್ಗೂ ಇಡಿ ಸಂಕಷ್ಟ ಎದುರಾಗೋ ಸಾಧ್ಯತೆ ಇದೆ. ಒಂದ್ವೇಳೆ, ಲಕ್ಷ್ಮೀ ಹೆಬ್ಭಾಳ್ಕರ್ ವಿಚಾರಣೆಯಲ್ಲಿ ಏನಾದ್ರೂ ಪ್ರಮುಖ ಅಂಶಗಳು ದೊರೆತರೆ, ಡಿಕೆಶಿಗೆ ಮತ್ತಷ್ಟು ಸಂಕಷ್ಟ ಎದುರಾದ್ರೂ ಅಚ್ಚರಿಯಿಲ್ಲ. ಇವತ್ತು ಮಧ್ಯಾಹ್ನ 3 ಗಂಟೆಗೆ ಕೋರ್ಟ್ನಲ್ಲಿ ಡಿಕೆಶಿ ಪ್ರಕರಣ ವಿಚಾರಣೆಗೆ ಬರಲಿದೆ.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?