ನವದೆಹಲಿ : ಸಾಮಾನ್ಯವಾಗಿ ಕೋರ್ಟ್ನಲ್ಲಿ ಗಲಾಟೆ, ಗದ್ದಲಗಳಿಗೆ ಅವಕಾಶ ಇರೋದಿಲ್ಲ. ಯಾರೇ ಕೋರ್ಟ್ ಕಲಾಪಕ್ಕೆ ಬಂದ್ರೂ, ವಾದ-ಪ್ರತಿವಾದ ಕೇಳಬೇಕು. ಆದ್ರೆ, ಡಿಕೆಶಿ ಪ್ರಕರಣದಲ್ಲಿ ನ್ಯಾಯಮೂರ್ತಿ ಕುಲ್ಲಾರ, ಇವತ್ತು ಸಿಟ್ಟಾಗಿದ್ರು. ಡಿಕೆಶಿ ಬೆಂಬಲಿಗರ ವಿರುದ್ಧ ತಮ್ಮಅಸಮಾಧಾನವನ್ನ ಹೊರಹಾಕಿದ್ರು.
ಹೌದು. ಡಿಕೆಶಿ ಪ್ರಕರಣದ ವಾದ-ಪ್ರತಿವಾದ ಮುಗಿಯುತ್ತಿದ್ದಂತೆ, ಡಿಕೆ ಶಿವಕುಮಾರ್ ಜಾಮೀನು ನೀಡುವಂತೆ ಮನವಿ ಮಾಡಿದ್ರು. ಈ ವೇಳೆ, ಡಿಕೆಶಿ ಕಣ್ಣೀರಿಟ್ಟರು. ಆದ್ರೆ, ನ್ಯಾಯಮೂರ್ತಿ ನೋಡೋಣ ಎಂದು ಹೇಳಿ, ಆರ್ಡರ್ ಮಾಡಲು ಹೇಳಿದ್ರು. ಅಲ್ಲಿಗೆ ಡಿಕೆಶಿಗೆ ಜಾಮೀನು ಸಿಗಲ್ಲ ಅನ್ನೋದು ಪಕ್ಕಾ ಆಗಿತ್ತು. ಈ ನಡುವೆ, ಕೋರ್ಟ್ ಹಾಲ್ನಲ್ಲೇ ಇದ್ದ ಡಿಕೆಶಿ ಬೆಂಬಲಿಗರು, ಡಿಕೆಶಿ ಪರ ಘೋಷಣೆ ಕೂಗಿದ್ರು. ಕೆಲ ಕಾಲ ಕೋರ್ಟ್ನಲ್ಲಿ ಗದ್ದಲ, ಗಲಾಟೆ ಆಯ್ತು. ಇದರಿಂದ ನ್ಯಾಯಮೂರ್ತಿ ಕುಲ್ಲಾರ ಕೂಡ ಬೇಜಾರಾಗಿ, ಹೊರ ನಡೆದ್ರು.
ಇತ್ತ, ಡಿಕೆಶಿ ಬೆಂಬಲಿಗರು ಘೋಷಣೆ ಕೂಗುತ್ತಿದ್ದಂತೆ, ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ರು. ಅಲ್ದೆ, ಹೊರ ಬಂದ ಡಿಕೆಶಿ, ಬೆಂಬಲಿಗರನ್ನ ಸಮಾಧಾನ ಮಾಡಿದ್ರು. ನಿಮ್ಮ ಅಭಿಮಾನ, ಬೆಂಬಲಕ್ಕೆ ನಾನು ಚಿರಋಣಿ. ನೀವೆಲ್ಲಾ ಶಾಂತಯುತವಾಗಿ ಇರಬೇಕು. ನೀವು ಇಲ್ಲಿಂದ ಹೊರಡಿ ಎಂದು ಮನವಿ ಮಾಡಿದ್ರು.
ಮಗುವಿನ ವಿಚಾರಕ್ಕೆ ಚಂದನ್ ಶೆಟ್ಟಿ-ನಿವೇದಿತಾ ಗೌಡ ಡಿವೋರ್ಸ್!
RCB ತಂಡದಲ್ಲಿ ಅಬ್ಬರಿಸುತ್ತಿದ್ದಾನೆ ಸೆಹ್ವಾಗ್ ಸೋದರಳಿಯ!
ಬಿಳಿ ಅಥವಾ ಗುಲಾಬಿ ಇವೆರಡರಲ್ಲಿ ಯಾವ ಬಣ್ಣದ ಸೀಬೆಹಣ್ಣು ಆರೋಗ್ಯಕ್ಕೆ ಬೆಸ್ಟ್!
ಕೇಜ್ರಿವಾಲ್ ಪರ ಪ್ರತಿಭಟನೆಗೆ ಮುಂದಾದ ವಕೀಲರು : ಎಚ್ಚರಿಕೆ ನೀಡಿದ ಹೈಕೋರ್ಟ್
ದೆಹಲಿಯಲ್ಲಿ ಭೀಕರ ದುರಂತ.. 2 ಅಂತಸ್ತಿನ ಕಟ್ಟಡ ಧರಾಶಾಹಿ..ಇಬ್ಬರ ದುರ್ಮರಣ
ದೆಹಲಿ ಮದ್ಯ ಹಗರಣ ಕೇಸ್; ಕೆಸಿಆರ್ ಪುತ್ರಿ ಕೆ.ಕವಿತಾ ಬಂಧನ