Featured
ಡಿಕೆಶಿ ಪರವಾಗಿ ಮೈಲಾರಲಿಂಗೇಶ್ವರನಿಗೆ ಪೂಜೆ ಸಲ್ಲಿಸಿದ ಮಾಜಿ ಸಚಿವ ಟಿ.ಪರಮೇಶ್ವರ ನಾಯಕ್..! ತಪ್ಪಿನ ಕಾಣಿಕೆ ಸಲ್ಲಿಕೆ

ಬಳ್ಳಾರಿ : ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಡಿಕೆ ಶಿವಕುಮಾರ್ ಪರವಾಗಿ ಮಾಜಿ ಸಚಿವ ಟಿ. ಪರಮೇಶ್ವರ ನಾಯಕ್ ಪೂಜೆ ಸಲ್ಲಿಸಿದ್ದಾರೆ. ಬಳ್ಳಾರಿ ಜಿಲ್ಲೆ ಹೂವಿನಡಗಲಿ ತಾಲೂಕಿನಲ್ಲಿರೋ ಮೈಲಾರ ಗ್ರಾಮದಲ್ಲಿರೋ ಮೈಲಾರಲಿಂಗೇಶ್ವರನಿಗೆ ಟಿ.ಪರಮೇಶ್ವರ ನಾಯಕ ಪೂಜೆ ಸಲ್ಲಿಸಿ, ತಪ್ಪಿನ ಕಾಣಿಕೆ ಸಲ್ಲಿಸಿದ್ರು.
ಈ ಹಿಂದೆ ಡಿಕೆ ಶಿವಕುಮಾರ್, ಹೆಲಿಕಾಪ್ಟರ್ನಲ್ಲಿ ಬಂದು ಮೈಲಾರಲಿಂಗೇಶ್ವರನಿಗೆ
ಪೂಜೆ ಸಲ್ಲಿಸಿದ್ರು. ಇದು ಡಿಕೆಶಿ ಮಾಡಿದ ಪ್ರಮಾದವಾಗಿತ್ತು. ಹೀಗಾಗಿ ಡಿಕೆಶಿಗೆ ಸಂಕಷ್ಟ ಎದುರಾಗಿದೆ
ಎಂದು ಮೈಲಾರಲಿಂಗೇಶ್ವರ ದೇವಾಲಯದ ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್ ಹೇಳಿದ್ರು. ಜೊತೆಗೆ ಸಂಕಷ್ಟದಿಂದ
ಪಾರಾಗಲು, ಮೈಲಾರಲಿಂಗೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿ, ತಪ್ಪಿನ ಕಾಣಿಕೆ ನೀಡುವಂತೆ ಧರ್ಮದರ್ಶಿ
ವೆಂಕಪ್ಪಯ್ಯ ಒಡೆಯರ್ ಸಲಹೆ ನೀಡಿದ್ರು.
ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್ ಸಲಹೆ ಮೇರೆಗೆ ಇವತ್ತು ಡಿಕೆ ಶಿವಕುಮಾರ್
ಪರವಾಗಿ ಮಾಜಿ ಸಚಿವ ಟಿ.ಪರಮೇಶ್ವರ ನಾಯಕ್, ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ರು. ಜೊತೆಗೆ ತಪ್ಪಿನ ಕಾಣಿಕೆಯನ್ನ ದೇವರಿಗೆ ಸಮರ್ಪಣೆ ಮಾಡಿದ್ರು.
2018ರಲ್ಲಿ ಡಿಕೆಶಿ ಹೆಲಿಕಾಪ್ಟರ್ನಲ್ಲಿ ಶ್ರೀ ಕ್ಷೇತ್ರ ಮೈಲಾರಕ್ಕೆ ಭೇಟಿ ನೀಡಿ, ಕಾರಣಿಕ ಕೇಳಿದ್ರು. ಅಧಿಪತಿಯಾದ ಮೈಲಾರಲಿಂಗನ ಸನ್ನಿಧಿಯಲ್ಲಿ ಹೆಲಿಕಾಪ್ಟರ್ ಹಾರಿಸುವಂತಿಲ್ಲ ಅನ್ನೋದು ಇಲ್ಲಿನ ಪ್ರತೀತಿ. ಕಾಲ್ನಡಿಗೆ, ಎತ್ತಿನಗಾಡಿ, ವಾಹನಗಳ ಮೂಲಕ ಮಾತ್ರ ಈ ಕ್ಷೇತ್ರಕ್ಕೆ ಬಂದ್ರೆ ಒಳಿತು ಅನ್ನೋದು ಇಲ್ಲಿನ ನಂಬಿಕೆ. ಹೀಗಾಗಿಯೇ ಡಿಕೆಶಿ ಮಾಡಿದ ತಪ್ಪಿಗೆ ಇವತ್ತು ಕಾಣಿಕೆ ಜೊತೆ ಪೂಜೆ ಸಲ್ಲಿಸಲಾಯ್ತು.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?