Featured
ಜೆಡಿಎಸ್ನಲ್ಲಿ ಡಿಶುಂ ಡಿಶುಂ : HDK ಬಂದ್ರೂ GTD ಬರಲಿಲ್ಲ, ಪಕ್ಷ ಬಿಡ್ತಾರಾ ಜಿ.ಟಿ. ದೇವೇಗೌಡ.?

ಮೈಸೂರು : ಮಾಜಿ ಸಚಿವ ಜಿ.ಟಿ. ದೇವೇಗೌಡ ಅದ್ಯಾಕೋ ಏನೋ ಜೆಡಿಎಸ್ ಮೇಲೆ ಮುನಿಸಿಕೊಂಡಂತೆ ಕಾಣ್ತಿದೆ. ಪದೇ ಪದೇ ಜೆಡಿಎಸ್ ವಿರೋಧಿಸಿ ಹೇಳಿಕೆ ನೀಡ್ತಿದ್ದ ಜಿಟಿಡಿ, ಇವತ್ತು ಮೈಸೂರಲ್ಲೇ ಇದ್ರೂ ಜೆಡಿಎಸ್ ಚಿಂತನ-ಮಂಥನ ಕಾರ್ಯಕ್ರಮಕ್ಕೆ ಗೈರಾಗಿದ್ದಾರೆ. ಸ್ವತಃ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಬಂದಿದ್ರೂ, ಜಿಟಿಡಿ ಬಾರದೇ ಕಾರ್ಯಕ್ರಮವನ್ನ ಬಹಿಷ್ಕರಿಸಿದ್ದಾರೆ.
ಬೆಳಗ್ಗೆ 10 ಗಂಟೆಗೆ ಜೆಡಿಎಸ್ ಸಭೆ ನಿಗಧಿಯಾಗಿತ್ತು. ಆದ್ರೆ, 12.30ಕ್ಕೆ ಸಭೆ ಆರಂಭವಾಯ್ತು. ಆದ್ರೆ, ಜಿಟಿಡಿ ಬಾರಲೇ ಇಲ್ಲ. ಹುಣಸೂರು ಉಪಚುನಾವಣೆ ಮತ್ತು ಪಕ್ಷ ಸಂಘಟನೆ ವಿಚಾರವಾಗಿ ಜೆಡಿಎಸ್ ಚರ್ಚೆ ನಡಿಸಿತು. ಆದ್ರೆ, ಕುಮಾರಸ್ವಾಮಿ ಕಾರ್ಯಕ್ರಮಕ್ಕೆ ಜಿಟಿಡಿ ಗೈರಾಗುವ ಮೂಲಕ ತಾನು ಪಕ್ಷಕ್ಕೆ ಸ್ಪಷ್ಟ ಸಂದೇಶ ನೀಡಿದಂತಿದೆ.
ಸಭೆಗೆ ಗೈರಾಗಿರೋ ಬಗ್ಗೆ ಮಾತ್ನಾಡಿರೋ ಜಿಟಿಡಿ, ನನಗೆ ಸಭೆಗೆ ಆಹ್ವಾನವೇ ಇಲ್ಲ. ನನಗೆ ಸಭೆ ಬಗ್ಗೆ ಗೊತ್ತೇ ಇಲ್ಲ ಎಂದಿದ್ದಾರೆ. ಈ ಮೂಲಕ ಸ್ಥಳೀಯರು ನಾಯಕರು ಕೂಡ ಜಿಟಿಡಿಯವರನ್ನ ನಿರ್ಲಕ್ಷ್ಯ ಮಾಡಿರೋದು ಗೊತ್ತಾಗಿದೆ.
ಜೆಡಿಎಸ್ನಲ್ಲಿ ಅದ್ಯಾಕೋ ಏನೋ ಎಲ್ಲವೂ ಸರಿಯಿಲ್ಲ ಅನ್ನೋದು ಈ ಘಟನೆಯಿಂದ ಸಾಬೀತಾಗಿದೆ. ಇತ್ತೀಚೆಗಷ್ಟೇ ಹುಣಸೂರಲ್ಲಿ ಜೆಡಿಎಸ್ ಗೆಲ್ಲಲ್ಲ ಅಂತ ಜಿಟಿಡಿ ಹೇಳಿದ್ರು. ಈಗ ಸಭೆಗೂ ಹೋಗಿಲ್ಲ. ಮುಂದೆ ಪಕ್ಷವನ್ನೇ ಬಿಡ್ತಾರಾ..? ಎಲ್ಲಿ ಹೋಗ್ತಾರೆ..? ಬಿಜೆಪಿ ಸೇರ್ತಾರಾ.? ಇದೆಲ್ಲಕ್ಕೂ ಜಿಟಿ ದೇವೇಗೌಡ ಅವರೇ ಉತ್ತರ ನೀಡಬೇಕು.
You may like
ಮಗುವಿನ ವಿಚಾರಕ್ಕೆ ಚಂದನ್ ಶೆಟ್ಟಿ-ನಿವೇದಿತಾ ಗೌಡ ಡಿವೋರ್ಸ್!
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಕೆ. ಸುಧಾಕರ್ ಅವರ ಪ್ರವಾಸದ ವಿವರ ಏಪ್ರಿಲ್ 16, 2024
50 ವರ್ಷ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲ್ಲ: ಚಿಕ್ಕಬಳ್ಳಾಪುರ ಎನ್ಡಿಎ ಅಭ್ಯರ್ಥಿ ಡಾ.ಕೆ.ಸುಧಾಕರ್
ನಿರ್ಧರಿಸಿದೆ ದೊಡ್ಡಬಳ್ಳಾಪುರ ಮತ್ತೊಮ್ಮೆ ಮೋದಿ ಸರ್ಕಾರ
RCB ತಂಡದಲ್ಲಿ ಅಬ್ಬರಿಸುತ್ತಿದ್ದಾನೆ ಸೆಹ್ವಾಗ್ ಸೋದರಳಿಯ!
ಬಿಳಿ ಅಥವಾ ಗುಲಾಬಿ ಇವೆರಡರಲ್ಲಿ ಯಾವ ಬಣ್ಣದ ಸೀಬೆಹಣ್ಣು ಆರೋಗ್ಯಕ್ಕೆ ಬೆಸ್ಟ್!