ಕನಕಪುರ/ಬೆಂಗಳೂರು : ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಡಿಕೆ ಶಿವಕುಮಾರ್ ಬಂಧನ ವಿಚಾರ ಜಾತಿ ತಿರುವು ಪಡೆದಿದೆ. ಡಿಕೆ ಶಿವಕುಮಾರ್ ಬಂಧನದಿಂದ ರಾಜ್ಯದಲ್ಲಿ ಹೊಸ ಅಧ್ಯಾಯಕ್ಕೆ ಕಾರಣವಾಗಿದೆ. ಎಲ್ಲಾ ಸಮಾಜದವರನ್ನ ಗೌರವದಿಂದ ಕಾಣಬೇಕು. ಡಿಕೆ ಶಿವಕುಮಾರ್ ಬಂಧನ ವಿಚಾರ ನಿಜಕ್ಕೂ ಖಂಡನೀಯ ಎಂದು ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಹೇಳಿದ್ದಾರೆ. ಈ ಮೂಲಕ ಜಾತಿ ವಿಚಾರವಾಗಿಯೇ ಡಿಕೆಶಿ ಅರೆಸ್ಟ್ ಆದ್ರಾ ಅನ್ನೋ ಅನುಮಾನಕ್ಕೆ ಎಡೆಮಾಡಿದೆ.
ಕನಕಪುರದ ಡಿಕೆ ಶಿವಕುಮಾರ್ ಅವರ ಮನೆಗೆ ಭೇಟಿ ನೀಡಿದ ಹೆಚ್.ಡಿ. ಕುಮಾರಸ್ವಾಮಿ, ಡಿಕೆಶಿ ತಾಯಿಗೆ ಧೈರ್ಯ ತುಂಬಿದರು. ಈ ವೇಳೆ ಮಾತ್ನಾಡಿದ ಹೆಚ್ಡಿಕೆ, ಇಡಿ, ಐಟಿ ಅಧಿಕಾರಿಗಳನ್ನ ಬಿಜೆಪಿ ದುರುಪಯೋಗ ಪಡಿಸಿಕೊಳ್ತಿದೆ. ಗುಜರಾತ್ ಶಾಸಕರನ್ನ ರಕ್ಷಣೆ ಮಾಡಿದ ಸಮಯದಿಂದ, ಹೀಗೆ ನಿರಂತರ ದಾಳಿ ನಡೆಯುತ್ತಲೇ ಇತ್ತು. ಡಿಕೆಶಿ ಯಾವುದೇ ಸಾಕ್ಷ್ಯ ನಾಶ ಮಾಡಿಲ್ಲ ಎಂದು ಡಿಕೆಶಿ ಪರ ಹೆಚ್ಡಿಕೆ ಬ್ಯಾಟಿಂಗ್ ಮಾಡಿದ್ರು.
ನಮ್ಮ ಸಮುದಾಯದವರು ವಿಜಯದಶಮಿ ಸಮಯದಲ್ಲಿ ಪಿತೃಪಕ್ಷ ಪೂಜೆ ಮಾಡುತ್ತೇವೆ. ಆದ್ರೆ, ಅದಕ್ಕೆಲ್ಲ ಅವಕಾಶ ನೀಡದೇ ಇರೋದು ಖಂಡನೀಯ. ಎಲ್ಲರೂ ಎಲ್ಲಾ ಸಮಾಜವನ್ನ ಗೌರವಿಸಬೇಕು ಎಂದು ಹೇಳುವ ಮೂಲಕ, ಜಾತಿ ಲೆಕ್ಕಾಚಾರದಿಂದಲೇ ಡಿಕೆಶಿ ಅರೆಸ್ಟ್ ಆಗಿದ್ದಾರೆ ಎಂಬುದನ್ನ ಪರೋಕ್ಷವಾಗಿ ಹೆಚ್ಡಿಕೆ ಹೇಳಿದ್ರು.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?