Featured
ಕೋಟ್ಯಂತರ ಜನರ ಸ್ಫೂರ್ತಿ ಸುಷ್ಮಾ ಸ್ವರಾಜ್ : ಪ್ರಧಾನಿ ಮೋದಿ ಸಂತಾಪದ ನುಡಿ

ನವದೆಹಲಿ : ಭಾರತದ ರಾಜಕಾರಣದಲ್ಲಿ ಒಂದು ಅತ್ಯಾದ್ಭುತ ಅಧ್ಯಾಯ ಮತ್ತು ಚರಿತ್ರೆ ಅಂತ್ಯಗೊಂಡಿದೆ. ಸಾರ್ವಜನಿಕ ಸೇವೆ, ಬಡವರ ಜೀವನಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟ ಸುಷ್ಮಾ ಸ್ವರಾಜ್ ನಿಧನಕ್ಕೆ ಇಡೀ ಭಾರತವೇ ದುಃಖಿಸುತ್ತಿದೆ. ಹೀಗಂತ ಪ್ರಧಾನಿ ನರೇಂದ್ರ ಮೋದಿ, ಸುಷ್ಮಾ ಸ್ವರಾಜ್ ನಿಧನಕ್ಕೆ ಸಂತಾಪದ ನುಡಿಗಳನ್ನ ಬರೆದಿದ್ದಾರೆ.
ಸುಷ್ಮಾ ನಿಧನಕ್ಕೆ ಟ್ವಿಟ್ಟರ್ನಲ್ಲಿ ಸಂತಾಪ ಸೂಚಿಸಿರುವ ಮೋದಿ, ಕೋಟ್ಯಂತರ ಭಾರತೀಯರ ಸ್ಫೂರ್ತಿ ಸುಷ್ಮಾ ಸ್ವರಾಜ್. ಸುಷ್ಮಾ ಸ್ವರಾಜ್, ಪಕ್ಷಕ್ಕೆ ಮಾತ್ರ ಸೀಮಿತವಾಗದೇ ಅದರ ಹೊರಕ್ಕೂ ಮೆಚ್ಚುಗೆ ಗಳಿಸಿದ್ದವರು. ಅತ್ಯುತ್ತಮ ಸಂಸದೆಯಾಗಿದ್ರು ಅಂತ ಮೋದಿ ನೆನಪಿಸಿಕೊಂಡಿದ್ದಾರೆ. Sushma Ji’s demise is a personal loss. She will be remembered fondly for everything that she’s done for India. My thoughts are with her family, supporters and admirers in this very unfortunate hour. Om Shanti.— Narendra Modi (@narendramodi) August 6, 2019
ಬಿಜೆಪಿ ಸಿದ್ಧಾಂತ ಹಾಗೂ ಹಿತಾಸಕ್ತಿಗಳ ವಿಷಯ ಬಂದಾಗ ಯಾವುದೇ ಕಾರಣಕ್ಕೂ ಸುಷ್ಮಾ ರಾಜೀ ಆಗುತ್ತಿರಲಿಲ್ಲ. ಪಕ್ಷಕ್ಕೆ ಅವರ ಕೊಡುಗೆ ಅಪಾರವಾದದ್ದು ಎಂದು ಮೋದಿ ಹೇಳಿದ್ದಾರೆ.
ಸುಷ್ಮಾ ಸ್ವರಾಜ್ ಅತ್ಯುತ್ತಮ ಆಡಳಿತಾಧಿಕಾರಿ. ಪ್ರತಿಯೊಂದು ಜವಾಬ್ದಾರಿಯನ್ನು ಉನ್ನತ ಗುಣಮಟ್ಟದಲ್ಲಿ ನಿಭಾಯಿಸಿದ್ದಾರೆ. ಸುಷ್ಮಾ ಉತ್ತಮ ಕಾಳಜಿ ಜೊತೆ ಶ್ರದ್ಧೆಯನ್ನೂ ಹೊಂದಿದ್ದರು. ವಿವಿಧ ದೇಶಗಳ ಜೊತೆ ಸಂಬಂಧ ಉತ್ತಮಗೊಳಿಸುವಲ್ಲಿ ಸುಷ್ಮಾ ಪಾತ್ರ ಮೆಚ್ಚುವಂತದ್ದು ಎಂದು ಮೋದಿ ಸ್ಮರಿಸಿದ್ದಾರೆ.
ವಿಶ್ವದ ಯಾವುದೇ ಭಾಗದಲ್ಲಿ ಭಾರತೀಯರು ಸಂಕಷ್ಟಕ್ಕೆ ಎದುರಾಗಿದ್ದರೆ, ಅವರಿಗೆ ಸ್ಪಂದಿಸದೇ ಸುಷ್ಮಾ ಇರುತ್ತಿರಲಿಲ್ಲ ಎಂದು ಸುಷ್ಮಾ ಸ್ವರಾಜ್ ಕಾರ್ಯವೈಖರಿಯನ್ನ ಶ್ಲಾಘಿಸಿದ್ದಾರೆ ಮೋದಿ.
ಒಟ್ಟಿನಲ್ಲಿ, ಸುಷ್ಮಾ ಸ್ವರಾಜ್ ಇನ್ನು ನಮ್ಮೊಂದಿಗಿಲ್ಲ ಅನ್ನೋದೇ ನೋವಿನ ಸಂಗತಿ.
You may like

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?















