ಬೆಂಗಳೂರು : ಸಾಕಷ್ಟು ಹಗ್ಗಜಗ್ಗಾಟದ ಬಳಿಕ ಕೊನೆಗೂ ಮಂತ್ರಿಗಳಿಗೆ ಜಿಲ್ಲಾ ಉಸ್ತುವಾರಿಯನ್ನ ನೀಡಲಾಗಿದೆ. ಸಾಕಷ್ಟು ಕುತೂಹಲ ಮೂಡಿಸಿದ್ದ ಬೆಂಗಳೂರು ಉಸ್ತುವಾರಿಯನ್ನ ಸಿಎಂ ಯಡಿಯೂರಪ್ಪ ಜಾಣ್ಮೆಯಿಂದ ತಮ್ಮಲ್ಲೇ ಉಳಿಸಿಕೊಂಡಿದ್ದಾರೆ. ಬೆಂಗಳೂರು ಉಸ್ತುವಾರಿಗಾಗಿ ಡಿಸಿಎಂ ಅಶ್ವತ್ಥ ನಾರಾಯಣ ಹಾಗೂ ಆರ್. ಅಶೋಕ್ ನಡುವೆ ಪೈಪೋಟಿ ಇತ್ತು ಹೀಗಾಗಿ, ಯಾರಿಗೂ ಬೇಡ ಅಂತ ಸಿಎಂ ಯಡಿಯೂರಪ್ಪ ಅವರೇ ಉಳಿಸಿಕೊಂಡಿದ್ದಾರೆ.
ಈ ನಡುವೆ, ಬಳ್ಳಾರಿ ಉಸ್ತುವಾರಿ ನಿರೀಕ್ಷೆ ಮಾಡಿದ್ದ ಶ್ರೀರಾಮುಲುಗೆ ಭಾರೀ ನಿರಾಸೆಯಾಗಿದೆ. ಈ ಹಿಂದೆಯೇ ಸಿಎಂ ಯಡಿಯೂರಪ್ಪ ಬಳಿ ಬಳ್ಳಾರಿ ಉಸ್ತುವಾರಿ ನೀಡುವಂತೆ ರಾಮುಲು ಮನವಿ ಮಾಡಿದ್ರು. ಆದ್ರೆ, ರಾಮುಲುಗೆ ಚಿತ್ರದುರ್ಗ ಹಾಗೂ ರಾಯಚೂರು ಉಸ್ತುವಾರಿ ನೀಡಲಾಗಿದೆ. ತವರು ಜಿಲ್ಲೆಯ ಉಸ್ತುವಾರಿ ಸಿಗದೇ ಇರೋದಕ್ಕೆ ಸಹಜವಾಗಿಯೇ ಶ್ರೀರಾಮುಲುಗೆ ಭಾರಿ ನಿರಾಸೆಯಾಗಿದೆ.
ಯಾವ ಜಿಲ್ಲೆ ಯಾರು ಉಸ್ತುವಾರಿ ಅನ್ನೋದನ್ನ ನೋಡೋದಾದ್ರೆ.
ಬಿ.ಎಸ್. ಯಡಿಯೂರಪ್ಪ ಬೆಂಗಳೂರು ನಗರ
ಗೋವಿಂದ ಕಾರಜೋಳ ಬಾಗಲಕೋಟೆ, ಕಲಬುರಗಿ
ಡಾ.ಅಶ್ವತ್ಥ ನಾರಾಯಣ ರಾಮನಗರ, ಚಿಕ್ಕಬಳ್ಳಾಪುರ
ಲಕ್ಷ್ಮಣ ಸವದಿ ಬಳ್ಳಾರಿ, ಕೊಪ್ಪಳ
ಕೆ.ಎಸ್. ಈಶ್ವರಪ್ಪ ಶಿವಮೊಗ್ಗ, ದಾವಣಗೆರೆ
ಆರ್.ಅಶೋಕ್ ಬೆಂಗಳೂರು ಗ್ರಾಮಾಂತರ, ಮಂಡ್ಯ
ಜಗದೀಶ್ ಶೆಟ್ಟರ್ ಬೆಳಗಾವಿ, ಹುಬ್ಬಳ್ಳಿ-ಧಾರವಾಡ
ಬಿ.ಶ್ರೀರಾಮುಲು ಚಿತ್ರದುರ್ಗ, ರಾಯಚೂರು
ಎಸ್.ಸುರೇಶ್ ಕುಮಾರ್ ಚಾಮರಾಜನಗರ
ವಿ.ಸೋಮಣ್ಣ ಮೈಸೂರು, ಕೊಡಗು
ಸಿ.ಟಿ. ರವಿ ಚಿಕ್ಕಮಗಳೂರು
ಬಸವರಾಜ ಬೊಮ್ಮಾಯಿ ಹಾವೇರಿ, ಉಡುಪಿ
ಕೋಟ ಶ್ರೀನಿವಾಸ ಪೂಜಾರಿ ಮಂಗಳೂರು
ಜೆ.ಸಿ. ಮಾಧುಸ್ವಾಮಿ ತುಮಕೂರು, ಹಾಸನ
ಸಿಸಿ ಪಾಟೀಲ್ ಗದಗ, ವಿಜಯಪುರ
ಹೆಚ್.ನಾಗೇಶ್ ಕೋಲಾರ
ಪ್ರಭು ಚೌವ್ಹಾಣ್ ಬೀದರ್, ಯಾದಗಿರಿ
ಶಶಿಕಲಾ ಜೊಲ್ಲೆ ಉತ್ತರ ಕನ್ನಡ
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?