Featured
ಕೆಪಿಸಿಸಿ ಅಧ್ಯಕ್ಷಗಾದಿ ವಿಚಾರ : ಸೈಲೆಂಟ್ ಆಗಿ ಗುಂಡೂರಾವ್ ನ್ನ ತಟ್ಟಿದ್ರು ಡಿಕೆಶಿ: ಏನಂದ್ರು ಇಲ್ಲಿದೆ ಓದಿ

ಬೆಂಗಳೂರು : ರಾಜ್ಯ ಕಾಂಗ್ರೆಸ್ನಲ್ಲಿ ಬಹಳ ಮುಖ್ಯವಾದ ಬದಲಾವಣೆಗಳೇನೂ ಕಾಣುತ್ತಿಲ್ಲ ಆದರೆ ಕೆಪಿಸಿಸಿ ಅಧ್ಯಕ್ಷರನ್ನ ಬದಲಾವಣೆ ಮಾಡಬಹುದೆಂಬ ಸುದ್ದಿ ಹಬ್ಬುತ್ತಿದೆ, ಅಷ್ಟಾದರೂ ಯಾವುದೇ ಸಮಸ್ಯೆ ಇರಲಿಲ್ಲ ಆದರೆ ಕೆಪಿಸಿಸಿ ಚುಕ್ಕಾಣಿಯನ್ನ ಟ್ರಬಲ್ ಶೂಟರ್ ಡಿಕೆ ಶಿವಕುಮಾರ್ ಹಿಡಿಯಬಹುದೆಂಬ ಕೂಗು ಬಲವಾಗಿದೆ. ಸಿಕ್ಕ ಅವಕಾಶಗಳನ್ನೆಲ್ಲಾ ಬಳಸಿ ಪ್ರಭಾವಿಯಾಗಿ ಬೆಳೆದ ಡಿಕೆ ಶಿವಕುಮಾರ್ ಇಂದು ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ಹಾಲಿ ಅಧ್ಯಕ್ಷ ದಿನೇಶ್ ಗುಂಡೂರಾವ್ ರನ್ನ ಕುಟುಕಿದ್ದಾರೆ.
ಪ್ರಚಾರದಿಂದ ಅಧ್ಯಕ್ಷ ಸ್ಥಾನ ಸಿಗುವುದಿಲ್ಲ ಎಂದು ಹೇಳಿಕೆ ನೀಡಿದ್ದ ಗುಂಡೂರಾವ್ ವಿರುದ್ಧ ಕುಟುಕಿದ ಡಿಕೆಶಿ, ಯಾರೋ ಕೊಡುವ ಹೇಳಿಕೆಗೆ ನಾನ್ಯಾಕೆ ಉತ್ತರ ನೀಡಲಿ, ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ನನ್ನ ಬಗ್ಗೆ ಗೊತ್ತಿದೆ, ಕಾಂಗ್ರೆಸ್ ಹಾಗೂ ಗಾಂಧಿ ಕುಟುಂಬಕ್ಕಂತೂ ನಾನು ನಿಷ್ಠ, ಲಾಬಿ ಮಾಡಿಕೊಂಡು ಅಧಿಕಾರ ಪಡೆಯುವ ದರ್ದು ನನಗಿಲ್ಲ, ಅವಕಾಶ ಸಿಗಬಹುದಾದ ಕಾಲದಲ್ಲೇ ನಾನು ಲಾಭಿ ಮಾಡಿಲ್ಲ, ಈಗೇಕೆ ಮಾಡಲಿ..? ಸಾಕಷ್ಟು ಸಮಯದಲ್ಲಿ ಅಧಿಕಾರ ಕೈ ತಪ್ಪಿದೆ, ಹಣೆಬರಹ ಸರಿ ಇದ್ರೆ ಸಿಗುತ್ತೆ, ಈಗ ಬಿಜೆಪಿ ಲಕ್ಷ್ಮಣ್ ಸವದಿಗೆ ಅಧಿಕಾರ ಸಿಕ್ಕಿಲ್ವಾ ಎಂದು ಹೇಳಿದರು.
ಅನರ್ಹರಿಗೆ ಟಾಂಗ್: ಮುಂಬೈನಲ್ಲಿದ್ದವರ ಬಗ್ಗೆ ನನಗೆ ಕನಿಕರವಿದೆ, ಅವರು ಮಂತ್ರಿಯಾಗುವುದನ್ನ ಎದುರು ನೋಡುತ್ತಿದ್ದೇನೆ, ಮೊದಲೆಲ್ಲಾ ನಾವು ಮಾಡಿದ ಪಾಪ ಪುಣ್ಯಗಳೆಲ್ಲಾ ಮಕ್ಕಳು ಮೊಮ್ಮಕ್ಕಳಿಗೆ ಬರ್ತಿತ್ತಂತೆ, ಆದರೆ ಈಗ ನಾವು ಮಾಡಿದ ಪಾಪ ನಮಗೇ, ಅನರ್ಹರಿಗಾಗಿ ಸ್ಥಾನಗಳು ಕಾದಿವೆ. ಅವರೆಲ್ಲಾ ಮಂತ್ರಿಗಳಾಗಲಿ ಬೇಗ ಎಂದರು.
ಇಂದಿರಾ ಕ್ಯಾಂಟೀನ್ : ಇಂದಿರಾ ಕ್ಯಾಂಟೀನ್ ಮುಚ್ಚುವುದೇ ಆದರೆ ನಾನೂ ಉಗ್ರ ಹೋರಾಟಕ್ಕೆ ಸಿದ್ಧ, ನಮ್ಮ ಕಾಲದಲ್ಲಾದ ಯಾವುದೇ ಯೋಜನೆಯನ್ನ ಮುಗಿಸಲು ಹೋದರೆ ಪ್ರತಿಭಟನೆ ಮಾಡುತ್ತೇವೆಂದರು.
You may like
ಬ್ರಾಂಡ್ ಬೆಂಗಳೂರು ಬೆಟರ್ ಬೆಂಗಳೂರು : ಡಿಕೆಶಿ
ಕಾಂಗ್ರೆಸ್ನಲ್ಲಿ ಚುರುಕಾಯಿತು ಪಕ್ಷ ಸಂಘಟನೆ- ಯುವ ಘಟಕದ ಅಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ
ಕೆಪಿಸಿಸಿ ಅಧ್ಯಕ್ಷರಿಗೆ ಶುಭ ಕೋರಿದ ಮುಖಂಡರು- ಅಭಿಮಾನಕ್ಕಾಗಿ ಬಿಸಿಲಿನಲ್ಲೆ ಕುಳಿತು ಪದಗ್ರಹಣ ವೀಕ್ಷಣೆ
ಕೆಪಿಸಿಸಿಗೆ ನೂತನ ಸಾರಥಿ- ಪದಗ್ರಹಣ ಕಾರ್ಯಕ್ರಮ ಬೀದರ್ನಲ್ಲಿ ಲೈವ್ ವೀಕ್ಷಣೆ
ತೊಗರಿ ಗೋದಾಮಿಗೆ ಬೆಂಕಿ ಇಟ್ಟ ಕಿಡಿಗೇಡಿಗಳು ಯಾರು..? ರೈತರು ಕಂಗಾಲು
ಯಾದಗಿರಿ ಕಾಂಗ್ರೆಸ್ ಕಚೇರಿಯಲ್ಲಿ ಡಿಕೆಶಿ ಪದಗ್ರಹಣ ವೀಕ್ಷಣೆ- ಹಲವು ಮುಖಂಡರಿಂದ ಜೈಕಾರ