Featured
ಕುರುಕ್ಷೇತ್ರದಲ್ಲಿ ನಿಖಿಲ್ ನಟನೆ ಸೂಪರ್ ಎಂದ ಸುಮಲತಾ : ಸಿನಿಮಾ ನೋಡಿ ದರ್ಶನ್ ಹೇಳಿದ್ದೇನು..?

ಬೆಂಗಳೂರು : ಕುರುಕ್ಷೇತ್ರ ಸಿನಿಮಾ ರಾಜ್ಯಾದ್ಯಂತ ಬಿಡುಗಡೆಯಾಗಿದ್ದು, ನಟಿ ಹಾಗೂ ಮಂಡ್ಯ ಸಂಸದೆ ಸುಮಲತಾ ಚಿತ್ರ ನೋಡಿದ್ರು. ಗುರುವಾರ ರಾತ್ರಿ ಮಂತ್ರಿಮಾಲ್ನಲ್ಲಿ ವಿಶೇಷ ಪ್ರದರ್ಶನ ವೀಕ್ಷಿಸಿದ ಸುಮಲತಾ, ಪ್ರತಿಯೊಬ್ಬ ಕನ್ನಡಿಗನೂ ನೋಡಬೇಕಾದ ಸಿನಿಮಾ ಕುರುಕ್ಷೇತ್ರ. ಅಷ್ಟೊಂದು ಅದ್ಭುತವಾಗಿ ಬಂದಿದೆ ಎಂದು ಕೊಂಡಾಡಿದ್ರು.
ಸಿನಿಮಾ ನೋಡಿಬಂದ ಮೇಲೆ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತ್ನಾಡಿದ ಸುಮಲತಾ, ಇದು ಕುರುಕ್ಷೇತ್ರ ಎಂದರೆ ತಪ್ಪಾಗುತ್ತೆ. ಇದೊಂದು ಅನುಭವ ಮತ್ತು ಜರ್ನಿ ಎಂದು ಕೊಂಡಾಡಿದ್ರು. ನಟ ದರ್ಶನ್ಗೆ ಸಂಗೊಳ್ಳಿ ರಾಯಣ್ಣ ಆದ್ಮೇಲೆ ಇದೊಂದು ಮೈಲುಗಲ್ಲು. ದುರ್ಯೋಧನನೇ ದರ್ಶನ್, ದರ್ಶನ್ ಅವರೇ ದುರ್ಯೋಧನ ಎನ್ನುವಷ್ಟು ಫರ್ಫೆಕ್ಟ್ ಆಗಿ ನಟಿಸಿದ್ದಾರೆ ಎಂದು ಡಚ್ಚುಗೆ ಅಮ್ಮ ಸುಮಲತಾ ಫುಲ್ ಮಾರ್ಕ್ಸ್ ಕೊಟ್ರು.
ಇದೇ ವೇಳೆ ಅಭಿಮನ್ಯು ಪಾತ್ರದಲ್ಲಿ ನಟಿಸಿರೋ ನಿಖಿಲ್ ಕುಮಾರಸ್ವಾಮಿ ಕೂಡ ಸೂಪರ್ ಫರ್ಪಾಮ್ ಮಾಡಿದ್ದಾರೆ. ಚೆನ್ನಾಗಿ ನಟಿಸಿದ್ದಾರೆ ಎಂದು ನಿಖಿಲ್ ಅಭಿನಯಕ್ಕೂ ಫುಲ್ ಮಾರ್ಕ್ಸ್ ಕೊಟ್ರು.
ಅಂಬರೀಶ್ ಅವರನ್ನ ಕೊನೆಯ ಬಾರಿ ಸ್ಕ್ರೀನ್ನಲ್ಲಿ ನೋಡಿದ್ದು. ಇದೊಂದು ಭಾವನಾತ್ಮಕ ಅನುಭವ ಎಂದು ಸುಮಲತಾ ಹೇಳಿದ್ರು. ಈ ಸಿನಿಮಾ ಮಾಡಿದ್ದಕ್ಕೆ ಮುನಿರತ್ನ ಅವರಿಗೆ ಥ್ಯಾಂಕ್ಸ್ ಹೇಳಬೇಕು ಅಂದ್ರು. ಸಿನಿಮಾದಲ್ಲಿ ಅರ್ಜುನ್ ಸರ್ಜಾ, ರವಿಚಂದ್ರನ್ ಪಾತ್ರಗಳು ಕೂಡ ಹೃದಯ ಸ್ಪರ್ಶಿಯಾಗಿವೆ ಎಂದ್ರು.
ಎಲ್ಲರೂ ನೋಡಲಿ.. ಆಮೇಲೆ ನನ್ನ ಮಾತು
ಸುಮಲತಾ ಜೊತೆ ಸಿನಿಮಾ ನೋಡಿ ಹೊರ ಬಂದ ದರ್ಶನ್ ಹೆಚ್ಚು ಮಾತನಾಡಲಿಲ್ಲ. ಎಲ್ಲರೂ ನೋಡಿದ್ಮೇಲೆ ನಾನು ಮಾತಾಡ್ತೀನಿ. ಅಂಬರೀಶ್ ಜೊತೆ ಕೊನೇ ಸಿನಿಮಾದಲ್ಲಿ ನಟಿಸಿದ್ದು ನನ್ನ ಭಾಗ್ಯ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೇಳಿದ್ರು. ಅಲ್ಲದೆ, ಮಹಾಭಾರತ ಎಲ್ಲರಿಗೂ ತಿಳಿಯಬೇಕು ಅಂದ್ರೆ, ಕುರುಕ್ಷೇತ್ರ ಸಿನಿಮಾ ನೋಡಬೇಕು ಅಂತ ದರ್ಶನ್ ಹೇಳಿದ್ರು.
ಮಂತ್ರಿಮಾಲ್ನಲ್ಲಿ ಪ್ರದರ್ಶನಗೊಂಡ ವಿಶೇಷ ಶೋಗೆ, ನಿರ್ಮಾಪಕ ಮುನಿರತ್ನ, ರಾಕ್ಲೈನ್ ವೆಂಕಟೇಶ್, ದೊಡ್ಡಣ್ಣ ಸೇರಿದಂತೆ ಹಲವು ನಟ, ನಟಿಯರು, ಚಿತ್ರರಂಗದ ಗಣ್ಯರು ಬಂದಿದ್ರು..

You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?