Featured
ಕಾವೇರಿ ಉಳಿಸೋಣ, ಪ್ರಕೃತಿ ಮಾತೆಗೆ ನಮಿಸೋಣ : ಜಗ್ಗಿ ವಾಸುದೇವ್ ಕರೆಗೆ ಜೈ ಎಂದ ಸಿಎಂ ಯಡಿಯೂರಪ್ಪ

ಬೆಂಗಳೂರು : ಕಾವೇರಿ ಉಳಿಸಿ, ನದಿಗಳನ್ನು ಉಳಿಸಿ, ಗಿಡ-ಮರ ಬೆಳೆಸಿ ಅನ್ನೋ ಅಭಿಯಾನ ಬಹುದೊಡ್ಡ ಮಟ್ಟದಲ್ಲಿ ಆಂದೋಲನವಾಗಿ ಮಾರ್ಪಟ್ಟಿದೆ. ಸದ್ಗುರು ಜಗ್ಗೀ ವಾಸುದೇವ್ ನೇತೃತ್ವದಲ್ಲಿ ನಡೀತಿರೋ ಹೋರಾಟಕ್ಕೆ ಇವತ್ತು ಬೆಂಗಳೂರಿನಲ್ಲಿ ಬೈಕ್ ರ್ಯಾಲಿ ರೂಪ ಪಡೆದುಕೊಂಡಿತ್ತು. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಭಾಗಿಯಾಗಿ, ಇಂಥಹ ಅರ್ಥಪೂರ್ಣ ಕಾರ್ಯಕ್ರಮದಲ್ಲಿ ಭಾಗಿಯಾಗಿರೋ ನನಗೆ ಸಾರ್ಥಕ ಭಾವ ಇದೆ ಎಂದರು.
ಕನ್ನಡದವರೇ ಆದ ಜಗ್ಗೀ ವಾಸುದೇವ್ ಅವರು ಕಾವೇರಿ ಕೂಗು ಕಾರ್ಯಕ್ರಮ ಆಯೋಜಿಸಿದ್ದಾರೆ. ಆರೂವರೆ ಕೋಟಿ ಜನರ ಗಮನ ಸೆಳೆಯುವ ಕಾರ್ಯಕ್ರಮ ಇದು. ಹವಾಮಾನ ವೈಪರೀತ್ಯ, ಬರಗಾಲ, ಪ್ರವಾಹಗಳನ್ನ ಕಂಡಿದ್ದೇವೆ. ಎರಡು ವರ್ಷದಿಂದ ರಾಜ್ಯದಲ್ಲಿ ಪ್ರವಾಹದ ಜೊತೆ ಬರ ಇದೆ. ಇದು ಪ್ರಕೃತಿ ಮಾತೆ ನಮಗೆ ನೀಡಿರುವ ಎಚ್ಚರಿಕೆ ಗಂಟೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ರು.
ಕಾವೇರಿ ಮುನ್ನೂರು ಕಿ.ಮೀ.ಗೂ ಹೆಚ್ಚು ದೂರು ಹರಿಯುತ್ತಾಳೆ. ಕಾವೇರಿಯನ್ನ ಉಳಿಸಲು ಅಭಿಯಾನ ಕೈಗೊಂಡಿರೋದು ಒಳ್ಳೇ ಬೆಳವಣಿಗೆ. ಸಸ್ಯ ನೆಡುವ ಕಾರ್ಯವನ್ನೂ ಹಮ್ಮಿಕೊಂಡಿದ್ದಾರೆ. ಸದ್ಗುರು ಸಮಾಜದ ಬದಲಾವಣೆಗೆ ಮುಖ್ಯ ಪಾತ್ರವಹಿಸ್ತಿದ್ದಾರೆಂದು ಮೆಚ್ಚುಗೆ ವ್ಯಕ್ತಪಡಿಸಿದ್ರು. ರಾಜ್ಯ ಅರಣ್ಯ ಇಲಾಖೆಯಲ್ಲಿ ಎರಡು ಕೋಟಿ ಸಸಿಗಳಿದ್ದು, ಒಂದು ಕೋಟಿ ಸಸಿಗಳನ್ನ ತಯಾರು ಮಾಡುವದರಲ್ಲಿ ಪ್ರವೃತ್ತರಾಗಿ ಎಂದು ತಿಳಿಸಿದ್ದೇನೆ. ಇದು ಸರ್ಕಾರದ ಕರ್ತವ್ಯ ಎಂದು ಬಿಎಸ್ವೈ ಹೇಳಿದ್ರು.

ಸದ್ಗುರು ಆಶಯದಂತೆ ರಾಜ್ಯ ಸರ್ಕಾರ ಕೂಡ ಅವರೊಂದಿಗೆ ಕೈಜೋಡಿಸಿ, ಕೆಲಸ ಮಾಡುತ್ತೇವೆ. ಕರ್ನಾಟಕ – ತಮಿಳುನಾಡು ಬಾಂಧವ್ಯ ಉತ್ತಮವಾಗಿರಲಿ. ನದಿಗಳು ತುಂಬಿ ಹರಿಯುತ್ತಿದ್ದು, ರೈತರು ನಿಟ್ಟುಸಿರು ಬಿಟ್ಟಿದ್ದಾರೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ರು.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?