ಮಂಗಳೂರು: ಕೆಫೆ ಕಾಫಿ ಡೇ ಮಾಲೀಕ ಹಾಗೂ ಎಸ್ ಎಂ ಕೃಷ್ಣ ಅಳಿಯ ಸಿದ್ಧಾರ್ಥ್ ಸಾವಿನ ಪ್ರಕರಣವನ್ನ ಇನ್ಮುಂದೆ ಕೊಲೆ ಆಯಾಮದಲ್ಲಿ ತನಿಖೆ ನಡೆಸುವುದಿಲ್ಲ ಕಾರಣ ಎಫ್ ಎಸ್ ಎಲ್ ವರದಿ ಪೊಲೀಸ್ ತನಿಖೆಯ ಆಯಾಮ ಬದಲಿಸಿದೆ.
ಜುಲೈ.೨೯ರಂದು ರಾತ್ರಿ ಉಲ್ಲಾಳ ಬಳಿಯಲ್ಲಿ ಹರಿಯುವ ಶರಾವತಿ ನದಿಸೇತುವೆಯಿಂದ ಸಿದ್ಧಾರ್ಥ್ ಕಾಣೆಯಾಗಿದ್ದರು, ನಂತರ ಅವರ ದೇಹವನ್ನ ಶೋಧಿಸಲಾಗಿತ್ತು, ಇವರನ್ನ ಯಾರಾದರೂ ತಳ್ಳಿರಬಹುದಾ ಅಥವಾ ಇವರೇ ಆತ್ಮಹತ್ಯೆ ಮಾಡಿಕೊಂಡಿರಬಹುದಾ ಎಂಬ ಚರ್ಚೆ ನಡೆಯುತ್ತಿತ್ತು. ಎಫ್ ಎಸ್ ಎಲ್ ( ವಿಧಿ ವಿಜ್ಞಾನ ಪ್ರಯೋಗಾಲಯ)ದ ವರದಿಯಲ್ಲಿ ಸಿದ್ಧಾರ್ಥ್ ಸೇತುವೆ ಮೇಲಿಂದ ಜಿಗಿದು, ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆಂದು ಹೇಳಿದೆ, ಈ ವರದಿ ಕೈ ಸೇರುತ್ತಿದ್ದಂತೆ ಪೊಲೀಸರು ಆತ್ಮಹತ್ಯೆಗೆ ಕಾರಣವೇನು ಎಂಬುದರ ಕುರಿತು ತನಿಖೆ ಮಾಡಲು ಆರಂಭಿಸಿದ್ದಾರೆ. ಆದರೆ ಒಂದು ವಿಷಯ ಗಮನದಲ್ಲಿಟ್ಟುಕೊಳ್ಳಬೇಕು, ಆತ್ಮಹತ್ಯೆಗೆ ಯಾರೇ ಕಾರಣರಾದರೂ ( ಪ್ರತ್ಯಕ್ಷ ಹಾಗೂ ಪರೋಕ್ಷ) ಅವರನ್ನ ಕೊಲೆ ಮಾಡಿದವರಂತೆಯೇ ಪರಿಗಣಿಸಲಾಗುತ್ತೆ.