ಬೆಂಗಳೂರು : ಕೆಫೆ ಕಾಫಿ ಡೇ ಸಂಸ್ಥಾಪಕ, ಮಾಲೀಕ ಸಿದ್ಧಾರ್ಥ್ ಸಾವು ಯಾರ ಊಹೆಗೂ ನಿಲುಕದ ದುರಂತ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಆದ್ರೆ, ಕುತೂಹಲಕಾರಿ ವಿಷಯ ಅಂದ್ರೆ, ಸಿದ್ಧಾರ್ಥ್ಗೆ ಸಂಕಷ್ಟ ಎದುರಾಗಿದೆ ಎಂದು ಅವಧೂತ ವಿನಯ್ ಗುರೂಜಿ ಹೇಳಿದ್ದರಂತೆ. ಹೌದು, ಚಿಕ್ಕಮಗಳೂರಿನ ಗೌರಿಗದ್ದೆಯ ವಿನಯ್ ಗುರೂಜಿ, ಸಿದ್ಧಾರ್ಥ್ಗೆ ಕಂಟಕ ಕಾದಿದೆ ಎಂದು ಭವಿಷ್ಯ ನುಡಿದಿದ್ದರಂತೆ.
ಕಳೆದ ಭಾನುವಾರವಷ್ಟೇ ಚಿಕ್ಕಮಗಳೂರಿನ ಗೌರಿಗದ್ದೆ ಮಠದಲ್ಲಿ ವಿನಯ್ ಗುರೂಜಿಯನ್ನ, ಸಿದ್ಧಾರ್ಥ್ ಪುತ್ರ ಅಮರ್ತ್ಯ ಭೇಟಿಯಾಗಿದ್ದರಂತೆ. ಈ ವೇಳೆ, ನಿಮ್ಮ ತಂದೆಗೆ ಸಂಕಷ್ಟವಿದೆ. ನನಗೆ ಎಲ್ಲವೂ ನೀರಿನಿಂತೆ ಕಾಣುತ್ತಿದೆ ಎಂದು ವಿನಯ್ ಗುರೂಜಿ ಹೇಳಿದ್ದರಂತೆ. ಅಲ್ಲದೆ, ನೀವು ನಿಮ್ಮ ತಂದೆಯ ಜವಾಬ್ದಾರಿಯನ್ನ ವಹಿಸಿಕೊಳ್ಳಬೇಕು. ಆ ಶಕ್ತಿ ನಿಮಗೆ ದಯಪಾಲಿಸಲಿ ಎಂದು ಆಶೀರ್ವಾದ ಮಾಡಿದ್ದರಂತೆ ವಿನಯ್ ಗುರೂಜಿ.
ಸಿದ್ಧಾರ್ಥ್ ಪುತ್ರ ಅಮರ್ತ್ಯ ಹಾಗೂ ಕುಟುಂಬದವರಿಗೆ ತಿರುಪತಿಗೆ ಹೋಗಿ ತಿಮ್ಮಪ್ಪನ ದರ್ಶನ ಪಡೆಯುವಂತೆ ವಿನಯ್ ಗುರೂಜಿ ಸಲಹೆ ನೀಡಿದ್ರು. ಆದ್ರೆ, ಇಷ್ಟೊಂದು ದೊಡ್ಡ ಮಟ್ಟದ ಪ್ರಮಾದ ಕಾದಿದೆ ಎಂದು ಕುಟುಂಬಸ್ಥರು ಊಹಿಸಿರಲಿಲ್ಲ. ಮೊದಲೇ ಗುರೂಜಿಯನ್ನ ಭೇಟಿಯಾಗಿದ್ದರೆ ಬಹುಶಃ ಆಗಬಹುದಾದ ದುರಂತ ತಪ್ಪಬಹುದಿತ್ತೇನೋ..
ಸಿದ್ಧಾರ್ಥ್ಗೆ 100 ರೂಪಾಯಿ ಕೊಟ್ಟಿದ್ದ ವಿನಯ್ ಗುರೂಜಿ..!
ವಿನಯ್ ಗುರೂಜಿಯನ್ನೇ ಯಾರೇ ಭೇಟಿಯಾದ್ರೂ, ಅವರಿಗೆ ಏನಾದರು ವಸ್ತು ನೀಡುವ ಅಭ್ಯಾಸ ಗುರೂಗಳಿಗೆ ಇದೆ. ಜೊತೆಗೆ ಕೆಲವೊಮ್ಮೆ ಹಣವನ್ನೂ ನೀಡ್ತಾರೆ. ಹೀಗೆ, ಕಳೆದ ಐದಾರು ತಿಂಗಳ ಹಿಂದೆ ಸಿದ್ಧಾರ್ಥ್, ವಿನಯ್ ಗುರೂಜಿಯನ್ನ ಭೇಟಿಯಾಗಿದ್ದರಂತೆ. ಈ ವೇಳೆ, ಗುರೂಜಿ 100 ರೂಪಾಯಿಯನ್ನ ಸಿದ್ಧಾರ್ಥ್ಗೆ ನೀಡಿದ್ದರಂತೆ. ಆಗ, ನನಗ್ಯಾಕೆ 100 ರೂಪಾಯಿ. ಕೋಟ್ಯಂತರ ರೂಪಾಯಿ ಇದೆಯಲ್ಲ ಎಂದು ಸಿದ್ಧಾರ್ಥ್ ಹೇಳಿದ್ದರಂತೆ. ಇದಕ್ಕೆ ಪ್ರತಿಕ್ರಿಯಿಸಿದ್ದ ವಿನಯ್ ಗುರೂಜಿ, ಇದನ್ನ ಇಟ್ಕೋ ಮುಂದಿನ ದಿನಗಳಲ್ಲಿ ನಿನಗೇ ಅರ್ಥವಾಗುತ್ತೆ ಎಂದಿದ್ದರಂತೆ.
ಅಂದ್ರೆ, ವಿನಯ್ ಗುರೂಜಿಗೆ ಸಿದ್ಧಾರ್ಥ್ ಸಾಮ್ರಾಜ್ಯ ಪತನದ ಮುನ್ಸೂಚನೆ ಮೊದಲೇ ಸಿಕ್ಕಿತ್ತು ಎನ್ನಲಾಗಿದೆ. ಗುರೂಜಿ ಕೊಟ್ಟ ಸೂಚನೆಯನ್ನ ಪಾಲಿಸಿದ್ದೇ ಆಗಿದ್ದಲ್ಲಿ ಸಿದ್ಧಾರ್ಥ್ ಉಳಿಯುತ್ತಿದ್ದರೇನೋ ಅನ್ನೋ ಸಣ್ಣ ಆಸೆ. ಅದೇನೇ ಆಗ್ಲಿ, 50 ಸಾವಿರ ಕುಟುಂಬಗಳಿಗೆ ಬೆಳಕಾಗಿದ್ದ ಸಿದ್ಧಾರ್ಥ್ ಇನ್ನು ನೆನಪು ಮಾತ್ರ. ನಮ್ಮನ್ನೆಲ್ಲಾ ಸಿದ್ಧಾರ್ಥ್ ಬಿಟ್ಟು ಹೋಗಿದ್ರೂ, ಅವರ ನೆನಪುಗಳು ಅಚ್ಚಳಿಯದೇ ಉಳಿಯಲಿವೆ..
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?