ಬೆಳಗಾವಿ: ಬಿಜೆಪಿ ಡಿಕೆ ಶಿವಕುಮಾರ್ ವಿರುದ್ಧ ಸೇಡಿನ ರಾಜಕಾರಣ ಮಾಡ್ತಿಲ್ಲ, ಕಾನೂನು ಕ್ರಮ ಜರುಗಿಸಿದಾಗ ಎಲ್ಲರೂ ಹೀಗೇ ಮಾತಾಡೋದು ಎಂದು ಸಚಿವ ಮಾಧುಸ್ವಾಮಿ ಹೇಳಿದ್ದಾರೆ, ಬೆಳಗಾವಿಯಲ್ಲಿ ಮಾತನಾಡಿ, ಡಿಕೆಶಿ ಹಾಗೂ ನಾನು ಒಳ್ಳೆಯ ಸ್ನೇಹಿತರು, ಡಿಕೆಶಿ ತಪ್ಪು ಮಾಡಿದ್ದಾರೋ ಇಲ್ವೋ ಗೊತ್ತಿಲ್ಲ, ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಇವರು ತನಿಖೆಗೆ ಸಹಕರಿಸುತ್ತಿಲ್ಲ ಎಂದು ಹೇಳುತ್ತಿದ್ದಾರೆ. ಹಾಗಾದರೆ ಡಿಕೆಶಿ ಸಹಕರಿಸಬೇಕಿತ್ತು. ನಿನ್ನೆ ಬಂಧನವಾದಾಗ ಇಡಿ ಕಚೇರಿ ಎದುರು ಸಾಕಷ್ಟು ಜನರನ್ನ ಸೇರಿಸಲಾಗಿತ್ತು. ಇದರ ಅವಶ್ಯಕತೆ ಇರಲಿಲ್ಲ, ಸಚಿವ ಗೋವಿಂದ ಕಾರಜೋಳ ಉಪ್ಪು ತಿಂದವರು ನೀರು ಕುಡಿಯಬೇಕು ಎಂದು ಈ ಅರ್ಥದಲ್ಲಿ ಹೇಳಿಲ್ಲ, ತಪ್ಪಿತಸ್ಥರನ್ನ ಕಾನುನು ಶಿಕ್ಷಿಸುತ್ತೆ ಅಂತ ಹೇಳಿದ್ದು ಎಂದರು.
ಡಿಕೆ ಶಿವಕುಮಾರ್ ಬಂಧನದ ವಿರುದ್ಧ ಸಾಕಷ್ಟು ಪ್ರತಿಭಟನೆ, ಬಸ್ ಗಳಿಗೆ ಕಲ್ಲುತೂರಾಟ ನಡೆಯುತ್ತಿದೆ, ಇವನ್ನೆಲ್ಲಾ ಸಹಿಸಿಕೊಳ್ಳಲಾಗದು, ಕಾನೂನು ಸುವ್ಯವಸ್ಥೆಗೆ ಧಕ್ಕೆಯಾದಲ್ಲಿ ಕ್ರಮ ಜರುಗಿಸುತ್ತೇವೆ ಎಂದರು.
ಕೆ.ಸಿ. ವ್ಯಾಲಿ, ಎತ್ತಿನಹೊಳೆ ಕಾಮಗಾರಿ ಚುರುಕುಗೊಳಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಸೂಚನೆ
ಆಸ್ಪತ್ರೆಯಿಂದ ಡಿಕೆಶಿ ಡಿಸ್ಚಾರ್ಜ್ : ನಿಮ್ಮೆಲರ ಆಶೀರ್ವಾದದಿಂದ ಚೆನ್ನಾಗಿದ್ದೇನೆ ಎಂದ ಡಿಕೆ
ಡಿಕೆಶಿಗೆ ಮತ್ತೆ ಸಂಕಷ್ಟ : ಆದ್ರೂ ಉನ್ನತ ಹುದ್ದೆ ಸಿಗುತ್ತೆ : ಡಿಕೆಶಿಗೆ ವಿನಯ್ ಗುರೂಜಿ ಅಭಯ.!
ಡಿಕೆ ಶಿವಕುಮಾರ್ಗೆ ಇವತ್ತೇ ಜಡ್ಜ್ಮೆಂಟ್ ಡೇ : ಜಾಮೀನು ಸಿಗುತ್ತಾ..? ಇಲ್ಲ ತಿಹಾರ್ ಜೈಲೇ ಗತಿನಾ..?
ಡಿಕೆಶಿ ಆಯ್ತು, ಈಗ ಡಿಕೆ ಸುರೇಶ್ ಸರದಿ : ಡಿಕೆಸು ಕೂಡ ಅರೆಸ್ಟ್ ಆಗ್ತಾರಾ..?
ಇನ್ನೂ ನಾಲ್ಕು ದಿನ ತಿಹಾರ್ ಜೈಲಲ್ಲೇ ಡಿಕೆಶಿ : ಬುಧವಾರ ಜಾಮೀನು ತೀರ್ಪು