Featured
ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಬೀಳಿಸಿದ್ದು ಯಾರು..? ಡಬಲ್ ಗೇಮ್ ಆಡ್ತಿದ್ದಾರಾ ಡಿಕೆಶಿ..?

ಬೆಂಗಳೂರು : ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಪತನವಾಗಿ ಒಂದು ತಿಂಗಳೇ ಕಳೆದು ಹೋಯ್ತು. ಆದ್ರೀಗ ಒಬ್ಬರ ಮೇಲೊಬ್ಬರು ಕೆಸರೆರಚಾಟ ಮಾಡ್ಕೊಳ್ತಿದ್ದಾರೆ. ಸಮ್ಮಿಶ್ರ ಸರ್ಕಾರ ಬೀಳಲು ಸಿದ್ದರಾಮಯ್ಯ ಕಾರಣ ಅಂತ ಸ್ವತಃ ದೇವೇಗೌಡರೇ ಹೇಳಿದ್ದು, ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ. ಇತ್ತ, ಹೆಚ್.ಡಿ. ಕುಮಾರಸ್ವಾಮಿ ಕೂಡ ಸಿದ್ದುನೇ ಕಣ್ರೀ, ಸರ್ಕಾರ ಬೀಳಿಸಿದ್ದು ಎಂದಿದ್ದಾರೆ. ಅಪ್ಪ-ಮಕ್ಕಳ ಆರೋಪಕ್ಕೆ ಸರಿಯಾಗಿಯೇ ತಿರುಗೇಟು ಕೊಟ್ಟಿರೋ ಸಿದ್ದು, ದೇವೇಗೌಡ, ಕುಮಾರಸ್ವಾಮಿ, ರೇವಣ್ಣ ಅವರಿಂದಲೇ ಸರ್ಕಾರ ಪತನ ಆಯ್ತು ಅಂತ ಬಾಂಬ್ ಸಿಡಿಸಿದ್ದು ಆಯ್ತು.
ಇಷ್ಟೆಲ್ಲದರ ಮಧ್ಯೆ, ಸಿದ್ದರಾಮಯ್ಯ ತಿರುಗೇಟಿಗೆ ಬಹುತೇಕ ಕಾಂಗ್ರೆಸ್ನ ಎಲ್ಲಾ ನಾಯಕರು ದನಿಯಾಗಿ ನಿಂತಿದ್ದು, ಸಿದ್ದುಗೆ ಬೆಂಬಲ ನೀಡ್ತಿದ್ದಾರೆ. ಆದ್ರೆ, ಕಾಂಗ್ರೆಸ್ ಟ್ರಬಲ್ ಶೂಟರ್ ಡಿಕೆ ಶಿವಕುಮಾರ್ ಮಾತ್ರ, ಸಿದ್ದುಗೆ ಬೆಂಬಲ ನೀಡದೇ, ತಪ್ಪಿಸಿಕೊಳ್ತಿದ್ದಾರೆ.
ಡಿಕೆಶಿ ಡಬಲ್ ಗೇಮ್ ಯಾಕೆ.?
ಸಮ್ಮಿಶ್ರ ಸರ್ಕಾರ ಬೀಳಿಸಿದ್ದು ಯಾರು ಅನ್ನೋ ಚರ್ಚೆ ವಿಚಾರವಾಗಿ ಮಾಧ್ಯಮಗಳ ಡಿಕೆ ಶಿವಕುಮಾರ್ ಅವರನ್ನ ಪ್ರಶ್ನೆ ಕೇಳಿದ್ರೆ, ಉತ್ತರ ಕೊಡದೇ ಜಾರಿಕೊಳ್ತಿದ್ದಾರೆ. ನಾನು ಪೇಪರ್ ನೋಡಲ್ಲ, ಟಿವಿ ನೋಡಲ್ಲ. ಯಾರು ಯಾರು ಏನೇನ್ ಹೇಳಿದ್ದಾರೋ ಗೊತ್ತಿಲ್ಲ ಎಂದು ಉತ್ತರ ನೀಡದೇ ಜಾರಿ ಕೊಳ್ತಿದ್ದಾರೆ.
ಸಿದ್ದರಾಮಯ್ಯ ಏನು ಹೇಳಿದ್ದಾರೆ ಅನ್ನೋದು ಇಡೀ ರಾಜ್ಯದ ಜನತೆಗೆ ಗೊತ್ತು. ಅಂತದ್ರಲ್ಲಿ ಡಿಕೆಶಿಗೆ ಗೊತ್ತಿಲ್ವಾ ಅನ್ನೋ ಪ್ರಶ್ನೆ ಈಗ ಎಲ್ಲೆಡೆ ಚರ್ಚೆ ಆಗ್ತಿದೆ. ಡಿಕೆಶಿ ಯಾಕೆ ಡಬಲ್ ಗೇಮ್ ಆಡ್ತಿದ್ದಾರೆ. ಅತ್ತ ಜೆಡಿಎಸ್ ನಾಯಕರ ಹೇಳಿಕೆಗೂ ನೋ ರಿಯಾಕ್ಷನ್. ಇತ್ತ ಸಿದ್ದು ಹೇಳಿಕೆಗೂ ನೋ ರಿಯಾಕ್ಷನ್. ದೇವೇಗೌಡರನ್ನ ಸಮರ್ಥಿಸಿಕೊಂಡ್ರೆ, ಕಾಂಗ್ರೆಸ್ ನಾಯಕರು ಕೋಪ ಮಾಡಿಕೊಳ್ತಾರೆ. ಒಂದ್ವೇಳೆ, ಸಿದ್ದರಾಮಯ್ಯ ಅವರ ಹೇಳಿಕೆಯನ್ನ ಸಮರ್ಥಿಸಿಕೊಂಡ್ರೆ, ಜೆಡಿಎಸ್ ನಾಯಕರು ಅದಕ್ಕಿಂತೂ ಹೆಚ್ಚಾಗಿ ತಮ್ಮ ಸಮುದಾಯ ಅಂದ್ರೆ, ಗೌಡರ ಸಮುದಾಯವೇ ವಿರೋಧಿಸುತ್ತೆ ಅನ್ನೋ ಭಯ ಡಿಕೆಶಿಗೆ ಕಾಡಿದಂತೆ ಕಾಣ್ತಿದೆ.
ಹೀಗಾಗಿಯೇ ಸದ್ಯ ರಾಜ್ಯ ರಾಜಕೀಯದಲ್ಲಿ ಸಮ್ಮಿಶ್ರ ಸರ್ಕಾರ ಪತನದ ಕುರಿತೇ ಚರ್ಚೆ ಆಗ್ತಿದೆ. ಕಾಂಗ್ರೆಸ್ ನಾಯಕರೆಲ್ಲಾ ಸಿದ್ದರಾಮಯ್ಯ ಅವರೇ ಸರಿ ಅಂತಿದ್ರೆ, ಡಿಕೆಶಿ ಮಾತ್ರ ಮೌನಂ ಮೌನಂ ಅಂತಿದ್ದಾರೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?