Featured
ಕರ್ನಾಟಕದಲ್ಲಿ ಜನಸಂಖ್ಯೆ ಕಡಿಮೆ ಇದೆ : ಆದರೂ ಮೋದಿ ತಪ್ಪು ಮಾಡಲು ಹೊರಟಿದ್ದಾರೆ.? ಕನ್ನಡಿಗರ ಆಗ್ರಹವೇನು..?

ಬೆಂಗಳೂರು : ಹೀಗೊಂದು ಪ್ರಶ್ನೆ ಸೋಶಿಯಲ್ ಮೀಡಿಯಾದಲ್ಲಿ ಎದ್ದಿದೆ. ಕನ್ನಡ ಪರ ಹೋರಾಟಗಾರರು ಮೋದಿ ಸರ್ಕಾರವನ್ನ ಈ ರೀತಿಯಾಗಿ ಪ್ರಶ್ನೆ ಮಾಡಿದ್ದಾರೆ. ಕರ್ನಾಟಕದಲ್ಲಿ ಜನಸಂಖ್ಯೆ ಸ್ಫೋಟ ಆಗಿಲ್ಲ. ಹೀಗಾಗಿ, ಕರ್ನಾಟಕದಲ್ಲಿ ಜನಸಂಖ್ಯೆ ನಿಯಂತ್ರಿಸೋ ಅಗತ್ಯವೂ ಇಲ್ಲ. ಆದ್ರೆ, ಉತ್ತರ ಪ್ರದೇಶ, ಬಿಹಾರ ಸೇರಿದಂತೆ ಉತ್ತರ ಭಾರತದ ರಾಜ್ಯಗಳಲ್ಲಿ ಜನಸಂಖ್ಯೆ ಸ್ಫೋಟವಿದೆ. ಜನಸಂಖ್ಯೆಗೆ ನಿಯಂತ್ರಣ ಬೇಕಿರೋದು ಉತ್ತರ ಭಾರತದಲ್ಲಿ ಎಂಬುದು ಕನ್ನಡ ಪರ ಹೋರಾಟಗಾರರ ವಾದ.
ಈ ಕುರಿತು ಬನವಾಸಿ ಬಳಗದ ಅರುಣ್ ಜಾವಗಲ್ ಅವರು, ತಮ್ಮ ಫೇಸ್ಬುಕ್ನಲ್ಲಿ ವಿವರವಾಗಿ ಬರೆದಿದ್ದಾರೆ. ಅರುಣ್ ಜಾವಗಲ್ ಬರೆದಿರೋ ಬರಹ ಈ ರೀತಿಯಾಗಿದೆ..
ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದರಂತೆ..!
ದುರಂತವೇನೆಂದರೆ, ಉತ್ತರ ಪ್ರದೇಶ ಮತ್ತು ಬಿಹಾರದ ಸಮಸ್ಯೆಗಳು ಇಡೀ ಭಾರತದ ಸಮಸ್ಯೆಯೆಂದು ಬಿಂಬಿಸಲಾಗುತ್ತಿರುವುದು. ಜನಸಂಖ್ಯಾ ಸ್ಫೋಟದ ಸಮಸ್ಯೆ ಇರುವುದು ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ ಮಾತ್ರ. ಕರ್ನಾಟಕದಲ್ಲಿ ಜನಸಂಖ್ಯಾ ಸ್ಫೋಟದ ಸಮಸ್ಯೆಯಿಲ್ಲ.
ಜನಸಂಖ್ಯೆಯ ಸ್ಫೋಟವನ್ನು 2 ಅಂಶಗಳ ಮೂಲಕ ನಿರ್ಧರಿಸಬಹುದು. TFR ಮತ್ತು ಜನಸಾಂದ್ರತೆ.
- ಕರ್ನಾಟಕದ TFR 1.7ಕ್ಕಿಂತ ಕೆಳಗೆ ಹೋಗಿದೆ. (ಆರೋಗ್ಯಕರ ಟಿಎಫ್ಆರ್ 2.1)
- ಕರ್ನಾಟಕದ ಜನಸಾಂದ್ರತೆ ಸುಮಾರು 319, ಕರ್ನಾಟಕದ ಜನಸಾಂದ್ರತೆಯೂ ಆರೋಗ್ಯಕರವಾಗಿಯೇ ಇದೆ.
ಆದ್ರೆ, ಉತ್ತರ ಭಾರತದ ರಾಜ್ಯಗಳ ಟಿಎಫ್ಆರ್ ಮತ್ತು ಜನಸಾಂದ್ರತೆ ಎಷ್ಟಿದೆ..?
ಉತ್ತರ ಪ್ರದೇಶ TFR – 3.1
ಉತ್ತರ ಪ್ರದೇಶದ ಜನಸಾಂದ್ರತೆ – 828
ಬಿಹಾರದ TFR – 3.3
ಬಿಹಾರದ ಜನಸಾಂದ್ರತೆ – 1100
ಉತ್ತರ ಭಾರತದ ಕೆಲವು ರಾಜ್ಯಗಳ TFR ಮತ್ತು ಜನಸಾಂದ್ರತೆ ಆರೋಗ್ಯಕರ ಸಂಖ್ಯೆಗಿಂತಲೂ ಬಹಳಷ್ಟು ಹೆಚ್ಚಿದೆ.
ಪರಿಸ್ಥಿತಿ ಹೀಗೆ ಮುಂದುವರಿದ್ರೆ, ಮುಂದಿನ ದಿನಗಳಲ್ಲಿ ಕರ್ನಾಟಕ ಸಂಸದ ಸ್ಥಾನಗಳ ಸಂಖ್ಯೆ 22-23ಕ್ಕೆ ಇಳಿಕೆಯಾಗಬಹುದು. ಇದರಿಂದ ರಾಷ್ಟ್ರ ಮಟ್ಟದಲ್ಲಿ ಕನ್ನಡದ ಅಸ್ಥಿತ್ವ ಕಡಿಮೆಯಾಗಲಿದೆ ಎಂಬುದು ಕನ್ನಡ ಪರ ಹೋರಾಟಗಾರರ ವಾದ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?