Featured
ಕರೆಂಟ್ ಇಲ್ಲ.. ನೀರಿದ್ದರೂ ಕುಡಿಯಂಗಿಲ್ಲ : ಬೆಳಗಾವಿ ಪ್ರವಾಹ ಸಂತ್ರಸ್ತರ ಗೋಳು ಕೇಳೋವ್ರು ಇಲ್ಲ..!

ಬೆಳಗಾವಿ : ಮಹಾರಾಷ್ಟ್ರ ಮಳೆಯಿಂದ ಅತೀ ಹೆಚ್ಚು ಹಾನಿಗೆ ಒಳಗಾಗ ಜಿಲ್ಲೆ ಅಂದ್ರೆ, ನಮ್ಮ ಜಿಲ್ಲೆ ಬೆಳಗಾವಿ. ಒಂದೆಡೆ ಮಹಾರಾಷ್ಟ್ರ ಮಳೆಯಿಂದ ಅತೀ ಹೆಚ್ಚು ನೀರು ಬೆಳಗಾವಿ ಜಿಲ್ಲೆಗೆ ಹರಿದು ಬರ್ತಿದ್ರೆ, ಮತ್ತೊಂದೆಡೆ ಬೆಳಗಾವಿ ಜಿಲ್ಲೆಯಲ್ಲೂ ಭಾರೀ ಮಳೆ ಆಗ್ತಿದೆ. ಕಳೆದ ಒಂದು ವಾರದಿಂದ ವರುಣನ ಅಬ್ಬರ ಬೆಳಗಾವಿ ಜಿಲ್ಲೆಯಲ್ಲಿ ಜೋರಾಗಿಯೇ ಇದೆ. ಅದರಲ್ಲೂ ಚಿಕ್ಕೋಡಿ, ಅಥಣಿ, ಗೋಕಾಕ್, ರಾಮದುರ್ಗ, ಖಾನಾಪುರ ಸೇರಿದಂತೆ ಹಲವು ತಾಲೂಕುಗಳಲ್ಲಿ ಜೋರು ಮಳೆಯಾಗದ್ದು, ಸಾವಿರಾರು ಜನ ನಿರಾಶ್ರಿತರಾಗಿದ್ದಾರೆ.
ಮಹಾರಾಷ್ಟ್ರದಿಂದ ದಿನದಿಂದ ದಿನಕ್ಕೆ ನೀರಿನ ಹರಿವು ಹೆಚ್ಚಾಗ್ತಿದ್ದು, ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಹವೂ ಹೆಚ್ಚಾಗ್ತಿದೆ. ಮಳೆ ಹಾಗೂ ನೀರಿನ ಹರಿವು ನಿಲ್ಲದ ಹೊರತು ಯಾವುದೇ ಕಾರ್ಯಾಚರಣೆ ಮಾಡಲು ಕೂಡ ಆಗ್ತಿಲ್ಲ. ಈಗಾಗಲೇ ನದಿ ಪಾತ್ರದ ಜನರನ್ನ ಗಂಜಿ ಕೇಂದ್ರಗಳಿಗೆ ಸ್ಥಳಾಂತರ ಮಾಡಲಾಗಿದೆ. ಆದ್ರೆ, ಇನ್ನೂ ಸಾವಿರಾರು ಜನ, ಪ್ರವಾಹದಲ್ಲಿ ಸಿಲುಕಿದ್ದಾರೆ. ಅಲ್ಲದೆ, ನೂರಾರು ಗ್ರಾಮಗಳಿಗೆ ನೀರು ನುಗ್ಗಿದ್ದು, ಜನ ಪರದಾಡುವಂತಾಗಿದೆ.
ಕರೆಂಟ್ ಇಲ್ಲ.. ಕುಡಿಯಲು ನೀರಿಲ್ಲ.. ತಿನ್ನಲು ಊಟವಿಲ್ಲ..!
ಪ್ರವಾಹ ಪೀಡಿತ ಪಾಡು ಪಾಪ ಹೇಳತೀರದು. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಈಗಾಲೇ ಕರೆಂಟ್ ಕಟ್ ಆಗಿದೆ. ಬೆಳಗಾವಿ ಮಹಾನಗರ ಸೇರಿ ಗ್ರಾಮೀಣ ಪ್ರದೇಶಗಳಲ್ಲಿ ಕರೆಂಟ್ ಇಲ್ಲದಾಗಿ. ಬಹುತೇಕ ಕಡೆ ಟಿಸಿ, ಟ್ರಾನ್ಸ್ಫರ್ಮ್ಗಳು ಸುಟ್ಟು ಹೋಗಿವೆ. ಮನೆ, ಕಾಲೋನಿ, ನಗರ ಪ್ರದೇಶ, ಗಲ್ಲಿ ಗಲ್ಲಿಗಳಲ್ಲೂ ನೀರು ನಿಂತಿದೆ. ಹೀಗಾಗಿ, ಹಲವೆಡೆ ಮುಂಜಾಗೃತೆಯಿಂದಾಗಿ ಕರೆಂಟ್ ತೆಗೆಯಲಾಗಿದೆ.
ಮತ್ತೊಂದೆಡೆ ಹಲವು ಮಂದಿ ನೀರು-ಅನ್ನವಿಲ್ಲದ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಸುತ್ತಲು ನೀರಿದ್ರೂ, ಕುಡಿಯಲು ಆಗದ ಸ್ಥಿತಿ ಬೆಳಗಾವಿ ಜನರದ್ದು. ಈ ಮಧ್ಯೆ ರಕ್ಷಣಾ ಕಾರ್ಯ ಭರದಿಂದ ಸಾಗಿದ್ದು, ಹಗಲು-ರಾತ್ರಿ ಸಿಬ್ಬಂದಿ ಕೆಲಸ ಮಾಡ್ತಿದ್ದಾರೆ.
for more News Updates Please visit : www.risingkannada.com
You may like

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?















