Featured
ಕನ್ನಡಿಗರಿಗೆ ಇಲ್ಲ ಮಹಾದಾಯಿ, ಮಹಾರಾಷ್ಟ್ರಕ್ಕೆ ನೀರು ಕೊಡ್ತಾರಂತೆ CM ಯಡಿಯೂರಪ್ಪ : ಇದೆಂಥಾ ದುರ್ದೈವ..!

ರೈಸಿಂಗ್ ಕನ್ನಡ : ಚುನಾವಣೆಗಳು ಬಂದ್ರೆ, ಸಾವಿರಾರು ಆಮಿಷಗಳು ಕೊಡೋದು ಕಾಮನ್. ಆದ್ರೆ, ಕನ್ನಡಿಗರಿಗೆ ಅನ್ಯಾಯವಾಗುವಂತ ನಿರ್ಧಾರಗಳಿಗೆ ಸಿಎಂ ಬಿಎಸ್ ಯಡಿಯೂರಪ್ಪ ಮುಂದಾಗಿದ್ದಾರಾ ಅನ್ನೋ ಪ್ರಶ್ನೆ ಇದೀಗ ಕಾಡ್ತಿದೆ. ಇದಕ್ಕೆ ಕಾರಣವಾಗಿರೋದು ಸಿಎಂ ಬಿಎಸ್ ಯಡಿಯೂರಪ್ಪ ಅವರ ಮಾತು. ಮಹಾರಾಷ್ಟ್ರ ಚುನಾವಣಾ ಪ್ರಚಾರದಲ್ಲಿರೋ ಯಡಿಯೂರಪ್ಪ, ಕರ್ನಾಟಕದ ನೀರನ್ನೇ ಮಹಾರಾಷ್ಟ್ರಕ್ಕೆ ಹರಿಸೋದಾಗಿ ಹೇಳಿದ್ದಾರೆ.
ಯೆಸ್, ಬಿಜೆಪಿಗೆ ಮತ ಹಾಕಿದ್ರೆ, ಮಹಾರಾಷ್ಟ್ರ ಜನರಿಗೆ ಕರ್ನಾಟಕದಿಂದ ನೀರು ಕೊಡುವುದಾಗಿ ಯಡಿಯೂರಪ್ಪ ಹೇಳಿರೋದು ಸಾಕಷ್ಟು ಚರ್ಚೆ ಹಾಗೂ ಅನುಮಾನಗಳಿಗೆ ಕಾರಣವಾಗಿದೆ. ಕರ್ನಾಟಕ ಮತ್ತು ಮಹಾರಾಷ್ಟ್ರದ ನಡುವೆ ಕೃಷ್ಣಾ ಹಾಗೂ ಮಹಾದಾಯಿ ವಿವಾದವೇ ಇತ್ಯರ್ಥವಾಗಿಲ್ಲ. ಹೀಗಿರುವಾಗ ಸದ್ಯ ವೋಟಿಗಾಗಿ ಯಡಿಯೂರಪ್ಪ ಮಹಾರಾಷ್ಟ್ರ ಜನರ ಮನವೊಲಿಸಲು, ಕರ್ನಾಟಕದ ನೀರು ಕೊಡೋದಾಗಿ ಹೇಳಿದ್ದಾರೆ. ಕರ್ನಾಟಕದ ತುಬಚಿ ಬಬಲೇಶ್ವರ ಏತ ನೀರಾವರಿ ಯೋಜನೆಯ ನೀರನ್ನು ಬೋರಾ ನದಿಗೆ ಹರಿಸಲು ಚಿಂತನೆ ನಡೆಸಿರೋದಾಗಿ ಬಿಎಸ್ವೈ ಹೇಳಿದ್ದಾರೆ.
ಈ ಮೊದಲು ಅಧಿಕಾರಕ್ಕೆ ಬಂದ 15 ದಿನಗಳಲ್ಲೇ ಮಹದಾಯಿ ವಿವಾದಕ್ಕೆ ತೆರೆ ಎಳೆಯುವುದಾಗಿ ಯಡಿಯೂರಪ್ಪ ಭರವಸೆ ನೀಡಿದ್ರು. ಆದ್ರೆ, ಬಿಜೆಪಿ ಅಧಿಕಾರಕ್ಕೆ ಬಂದು 3 ತಿಂಗಳು ಕಳೆದರೂ ಮಹದಾಯಿ ವಿವಾದ ಬಗೆಹರಿದಿಲ್ಲ. ಇಷ್ಟೆಲ್ಲದರ ಮಧ್ಯೆ, ಯಡಿಯೂರಪ್ಪ ಈ ರೀತಿಯ ಹೇಳಿಕೆ ರಾಜಕೀಯ ವಲಯದಲ್ಲೇ ಅಲ್ಲದೆ, ರೈತರು ಕೂಡ ಆಕ್ರೋಶ ಹೊರಹಾಕಿದ್ದಾರೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?