Featured
ಕಣ್ಣೀರು ತರಿಸಲಿದೆ ಈರುಳ್ಳಿ, ನಲವತ್ತಿರೋದು ಅರವತ್ತಾಗತ್ತಾ..?ಓದಿ..

ಬೆಂಗಳೂರು: ಈರುಳ್ಳಿ ಬೆಲೆ ದಿನೇ ದಿನೇ ಏರುತ್ತಿದ್ದು ಗೌರಿಗಣೇಶ ಹಬ್ಬಕ್ಕೆ ಕೆಜಿಗೆ ಅರವತ್ತು ರೂಪಾಯಿ ದಾಟಿದರೂ ಆಶ್ಚರ್ಯ ಇಲ್ಲ ಎನ್ನುತ್ತಾರೆ ಮಾರುಕಟ್ಟೆ ಪಂಡಿತರು.
ಬಹುತೇಕ ಕರ್ನಾಟಕದ ಈರುಳ್ಳಿ ಮಾರುಕಟ್ಟೆ ಮಹಾರಾಷ್ಟ್ರದ ಪೂರೈಕೆಯನ್ನ ಅವಲಂಬಿಸಿದೆ. ಪೂನಾ ( ಪುಣೆ) ನಮ್ಮ ದೇಶಕ್ಕೆ ಅಧಿಕ ಈರುಳ್ಳಿ ಪೂರೈಕೆ ಮಾಡುತ್ತಿದೆ. ಹಾಗೂ ಅಧಿಕ ಸಂಖ್ಯೆಯಲ್ಲಿ ದಲ್ಲಾಳಿಗಳನ್ನೂ ಹೊಂದಿದೆ.
ವರ್ಷದ ಒಂಬತ್ತು ತಿಂಗಳು ಮಹಾರಾಷ್ಟ್ರದಲ್ಲಿನ ಈರುಳ್ಳಿ ನಮ್ಮ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರದ ವರ್ತಕರು ಹಾಗೂ ದಲ್ಲಾಳಿಗಳಿಗೆ ಹಂಚಿಕೆಯಾಗುತ್ತೆ. ಉಳಿದ ಮೂರು ತಿಂಗಳು ಮಾತ್ರ ರಾಜ್ಯದ ರೈತರಿಂದ ಪೂರೈಕೆಯಾಗುತ್ತೆ. ಆದರೆ ಈ ವರ್ಷ ಮಹಾರಾಷ್ಟ್ರ ಹಾಗೂ ಉತ್ತರ ಕರ್ನಾಟಕದೆಲ್ಲೆಡೆ ನೆರೆಹಾವಳಿಗೆ ರಸ್ತೆಗಳೂ ಕೊಚ್ಚಿಕೊಂಡು ಹೋಗಿರೋದ್ರಿಂದ ಕೃತಕ ಅಭಾವವನ್ನೂ ಸೃಷ್ಟಿಸಲಾಗಿದೆ. ಗೌರಿ ಗಣೇಶ ಹಬ್ಬವೂ ಹತ್ತಿರ ಬರುತ್ತಿದ್ದು ಈರುಳ್ಳಿ ಬೆಲೆ ಅರವತ್ತು ದಾಟಿದರೂ ಯಾವುದೇ ಆಶ್ಚರ್ಯ ಇಲ್ಲ.
ಮಹಾರಾಷ್ಟ್ರದ ಈರುಳ್ಳಿ ಹಾಗೂ ಉತ್ತರ ಕರ್ನಾಟಕದ ಈರುಳ್ಳಿ ಎರಡೂ ಈ ಬಾರಿ ಕೈಕೊಟ್ಟಿದೆ. ಅದರಲ್ಲೂ ಉತ್ತರ ಭಾರತಕ್ಕೆ ಈರುಳ್ಳಿ ಹೆಚ್ಚಾಗಿ ರಫ್ತು ಮಾಡಲಾಗುತ್ತೆ. ಬಹಳಷ್ಟು ಸಮಯದಲ್ಲಿ ಈರುಳ್ಳಿ ಕೆಜಿಗೆ 100 ರೂಪಾಯಿ ಆಗಿರೋ ಉದಾಹರಣೆ ಇದೆ. ಈರುಳ್ಳಿ ಶಾಪಕ್ಕೆ ದೆಹಲಿಯಲ್ಲಿ ಸರ್ಕಾರಗಳೇ ಉರುಳಿರೋ ಉದಾಹರಣೆಗಳು ನಮ್ಮ ಮುಂದಿವೆ.
ಯಾವುದಕ್ಕೂ ಈರುಳ್ಳಿ ಖರೀದಿಗೂ ಮುನ್ನ ಒಮ್ಮೆ ಯೋಚಿಸಿ, ಮೊದಲೇ ಎಲ್ಲಾ ತರಕಾರಿಗಳ ಬೆಲೆ ಹೆಚ್ಚುತ್ತಿದ್ದು, ಈರುಳ್ಳಿ ಶೀಘ್ರವೇ 60 ರೂ. ದಾಟುವುದಲ್ಲಿ ಡೌಟೇ ಇಲ್ಲ ಅನ್ನೋ ಮಾತು ಕೇಳಿ ಬರ್ತಿದೆ.