Featured
ಎಚ್ಚರ ಎಚ್ಚರ.. 2050ರ ವೇಳೆಗೆ ಭೂಮಿ ಮೇಲೆ ಆಹಾರ ಸಿಗಲ್ಲ..!

ರೈಸಿಂಗ್ ಕನ್ನಡ : ವಾತಾವರಣದಲ್ಲಿ ಉಷ್ಣಾಂಶ ಹೆಚ್ಚಾಗ್ತಿದೆ. ಗ್ಲೊಬಲ್ ವಾರ್ಮಿಂಗ್ ಕಾರಣದಿಂದ ಭೂಮಿ ಮೇಲೆ ಉಷ್ಣಾಂಶ ವಿಪರೀತವಾಗಿ ಹೆಚ್ಚಾಗ್ತಿದೆ. ಇದೇ ಕಾರಣಕ್ಕೆ ಮುಂದಿನ ದಿನಗಳಲ್ಲಿ ಆಹಾರ ಅಭಾವ ಉಂಟಾಗಲಿದೆ ಎಂದು ಅಂತಾರಾಷ್ಟ್ರೀಯ ಸಂಸ್ಥೆಯ ಸರ್ವೆಯೊಂದು ಹೇಳಿದೆ. ಆಹಾರ ಅಭಾವದಿಂದಾಗಿ 2050ರ ವೇಳೆಗೆ ಭೂಮಿ ಮೇಲೆ ಆಹಾರ ಸಿಗದೇ ಹೋಗುವಂತ ಸಾಧ್ಯತೆ ಇದೆ ಎನ್ನಲಾಗಿದೆ. ವಿಶ್ವಸಂಸ್ಥೆಯ ಸೆಕ್ರೆಟರಿ ಜನರಲ್, ಬನ್ ಕಿ ಮೂನ್ ನೇತೃತ್ವದಲ್ಲಿ ದಿ ಗ್ಲೋಬಲ್ ಕಮೀಷನ್ ಆನ್ ಅಡಾಪ್ಷನ್ ನಡೆಸಿದ ಸರ್ವೆಯಲ್ಲಿ ಈ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.
ಇಷ್ಟೇ ಅಲ್ಲದೆ, ಉಷ್ಣಾಂಶ ಹೆಚ್ಚಾಗಿರೋದ್ರಿಂದ, ಶೇಕಡಾ 30ರಷ್ಟು ಆಹಾರ ಉತ್ಪಾದನೆ ಕಡಿಮೆ ಆಗುತ್ತೆ. ಇದು ಪ್ರಪಂಚ ಪೂರ್ಣ ವ್ಯಾಪಿಸಿ, ಕೊನೆಗೆ 2050ರ ವೇಳೆಗೆ ಆಹಾರವೇ ಸಿಗಲ್ಲ ಎಂದು ಸರ್ವೇ ಹೇಳಿದೆ. ಇನ್ನೂ ಆಘಾತಕಾರಿ ಅಂಶ ಅಂದ್ರೆ, ಆಹಾರ ಅಭಾವ ಎದುರಿಸೋ ದೇಶಗಳಲ್ಲಿ ಭಾರತವೂ ಇರಲಿದೆ.
ವಿಶ್ವದಲ್ಲಿ 1000 ಕೋಟಿ ಜನಸಂಖ್ಯೆ ದಾಟಿದ್ರೆ, ಆಹಾರ ಉತ್ಪಾದನೆ ಮಾಡಲು ಭೂಮಿ ಸಾಕಾಗುವುದಿಲ್ಲ. ಉಷ್ಣಾಂಶ ಹೆಚ್ಚಾಗಿ, ಸಮುದ್ರಗಳ ನೀರು ಭೂ ಪ್ರದೇಶವನ್ನೇ ನುಂಗಿ ಹಾಕುತ್ತೆ. ಇದರಿಂದ ಮಳೆ ಪ್ರಮಾಣ ಕಡಿಮೆ ಆಗುತ್ತೆ. ಧೃವ ಪ್ರಾಂತ್ಯಗಳಲ್ಲಿ ಮಂಜು ಕರಗಿ, ಸಮುದ್ರ ತೀರದ ಪ್ರದೇಶಗಳು ಮುಳುಗಡೆ ಆಗುತ್ವೆ. ಇದೆಲ್ಲವೂ ಪ್ರಪಂಚ ವಿನಾಶದ ಎಚ್ಚರಿಕೆ ಎಂದು ಸರ್ವೆ ಹೇಳಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?