ಮೈಸೂರು: ಉಪ್ಪು ತಿಂದವರು ನೀರು ಕುಡಿಯಲೇ ಬೇಕೆಂದು ಡಿಕೆ ಶಿವಕುಮಾರ್ ಕುರಿತು ಹೇಳಿಕೆ ನೀಡಿದ್ದ ಡಿಸಿಎಂ ಗೋವಿಂದ ಕಾರಜೋಳ ತಮ್ಮ ಹೇಳಿಕೆಯನ್ನ ತಪ್ಪಾಗಿ ಅರ್ಥೈಸಲಾಗಿದೆ, ನಾನು ಹಾಗೆ ಹೇಳಿಕೆಯೇ ನೀಡಿಲ್ಲ ಎಂದಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ದಯವಿಟ್ಟು ಕ್ಷಮಿಸಿ ನಾನು ವಾಪಸ್ಸು ಪಡೆಯುವಂತ ಹೇಳಿಕೆಯನ್ನೆ ಕೊಟ್ಟಿಲ್ಲ, ನಾನೊಬ್ಬ ನಾನ್ ಕಾಂಟ್ರವರ್ಷಿಯಲ್ ಮನುಷ್ಯ, ಇನ್ನೊಬ್ಬರು ಕಷ್ಟದಲ್ಲಿರುವಾಗ ಅದನ್ನ ನೋಡಿ ಸಂತೋಷ ಪಡುವವನು ನಾನಲ್ಲ, ಸಹೋದರ ಡಿಕೆಶಿ ಬಗ್ಗೆ ನನಗೆ ಅಪಾರ ಗೌರವ ಇದೆ,
ನನ್ನ ಹೇಳಿಕೆಯನ್ನ ತಪ್ಪಾಗಿ ಅರ್ಥೈಸಲಾಗಿದೆ, ಉಪ್ಪು ತಿಂದಿದ್ದರೆ ನೀರು ಕುಡಿಯಬೇಕಾಗುತ್ತದೆ ಎಂದು ಹೇಳಿದ್ದೆ, ಡಿಕೆಶಿ ತಪ್ಪು ಮಾಡಿದ್ದಾರೆ ಅವರು ನೀರು ಕುಡಿಯಬೇಕೆಂದು ಎಲ್ಲೂ ಹೇಳಿಲ್ಲ, ಇಡಿ ಮತ್ತು ಐಟಿ ಸಂಸ್ಥೆಗಳು ಕಾಂಗ್ರೆಸ್ ಅಧಿಕಾರದ ಅವಧಿಯಲ್ಲೂ ಕೆಲಸ ಮಾಡಿವೆ, ಅಂದು ಮಾಡಿದ ತನಿಖೆಗಳನ್ನ ರಾಜಕೀಯ ಪ್ರೇರಿತ ಎಂದು ಹೇಳೋಕೆ ಆಗುತ್ತಾ.? ಈ ಮಾತನ್ನೆ ನಾನು ಡಿಕೆಶಿಯವರ ವಿಚಾರದಲ್ಲಿ ಹೇಳಿದ್ದೆ, ನನ್ನ ಹೇಳಿಕೆಯನ್ನ ತಪ್ಪಾಗಿ ಅರ್ಥೈಸಲಾಗಿದೆ ಎಂದು ಹೇಳಿದರು.
ಬೆಂಗಳೂರು ಅಭಿವೃದ್ಧಿಗೆ ಹೊಸ ಹೊಸ ಪ್ಲಾನ್..! – ಸ್ಯಾಂಕಿ ಕೆರೆ ಯೋಜನೆಗಳ ಚರ್ಚೆ ನಡೆಸಿದ ಡಿಸಿಎಂ ಡಾ. ಅಶ್ವತ್ಥನಾರಾಯಣ್
ಲೋಕೋಪಯೋಗಿ ಇಲಾಖೆಯ ಮಹತ್ವದ ಸಭೆ – ಡಿಸಿಎಂ ಗೋವಿಂದ ಕಾರಜೋಳ ಅಧ್ಯಕ್ಷತೆಯಲ್ಲಿ ಚರ್ಚೆ
ರಸ್ತೆ ಅಪಘಾತಗಳು ಹೆಚ್ಚಾಗಲು ಕಾರಣ ಅಭಿವೃದ್ಧಿ ಹೊಂದಿದ ರಸ್ತೆಗಳು: ಡಿಸಿಎಂ ಕಾರಜೋಳ
ಸವದಿ ಬಿಡದ ‘X’ factor ನಾಮಫಲಕದಲ್ಲೂ ಸೇರಿಸಿದ್ರೂ ಓದಿ….
ಈಶ್ವರಪ್ಪಗೆ ತಪ್ಪಿದ ಡಿಸಿಎಂ ಸ್ಥಾನ : ಮತ್ತೆ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಆ್ಯಕ್ಟೀವ್..! ಬಿಜೆಪಿಗೆ ಬಿಸಿ ತುಪ್ಪ..!
ಶ್ರೀರಾಮುಲು ಬೆಂಬಲಿಗರಿಂದ ಬಿಜೆಪಿಗೆ ತರಾಟೆ : ನೀಲಿ ಸಿನಿಮಾ ನೋಡಿದ್ರೆ ಡಿಸಿಎಂ ಹುದ್ದೆ ಕೊಡ್ತೀರಾ..?