Featured
ಆಗಸ್ಟ್ 8ರವರೆಗೆ ಸಂಪುಟ ವಿಸ್ತರಣೆ ಇಲ್ಲ : ಯಡಿಯೂರಪ್ಪ ಸುಮ್ಮನಿರೋದು ಯಾಕೆ..?

ಬೆಂಗಳೂರು : ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪದಗ್ರಹಣ ಮಾಡಿ ಒಂದು ವಾರವಾಯ್ತು. ಆದರೂ ಸಂಪುಟ ವಿಸ್ತರಣೆಗೆ ಇನ್ನೂ ಕೈಯಾಕಿಲ್ಲ. ಒಂದೆಡೆ ಪಕ್ಷದ ನಾಯಕ ಒತ್ತಡ ಜಾಸ್ತಿಯಾಗ್ತಿದೆ. ಮಂತ್ರಿ ಪದವಿ ಪಟ್ಟಿ ಉದ್ದುದ್ದ ಬೆಳೆಯುತ್ತಲೇ ಇದೆ. ಇತ್ತ, ಕಾಂಗ್ರೆಸ್, ಜೆಡಿಎಸ್ ಬಿಟ್ಟು ಬಂದಿರೋ ಅನರ್ಹ ಶಾಸಕರ ಪರಿಸ್ಥಿತಿಯೂ ಅಷ್ಟು ಚೆನ್ನಾಗಿಲ್ಲ. ಹೀಗಾಗಿ, ಏನು ಮಾಡ್ಬೇಕು ಅಂತ ತೋಚದ ಸ್ಥಿತಿಯಲ್ಲಿ ಯಡಿಯೂರಪ್ಪ ಇದ್ದಂತೆ ಕಾಣ್ತಿದೆ. ಇದಕ್ಕೆ ಜೊತೆಯಾಗಿ ಬಿಜೆಪಿ ಹೈಕಮಾಂಡ್ ಕೂಡ ಆಗಸ್ಟ್ 7ರವರೆಗೆ ಸುಮ್ಮನಿರುವಂತೆ ಹೇಳಿದೆ..?
ಆಗಸ್ಟ್ 7 ಯಾಕೆ..?
ಆಗಸ್ಟ್ 7ರಂದು ಅತೃಪ್ತ ಶಾಸಕರ ಪ್ರಕರಣದ ತೀರ್ಪು ಬರಬಹುದು. ಸುಪ್ರೀಂಕೋರ್ಟ್ನಲ್ಲಿ ಈ ಕುರಿತ ವಿಚಾರಣೆ ಇದ್ದು, ಆಗಸ್ಟ್ 7ರಂದು ಅತೃಪ್ತರ ಭವಿಷ್ಯ ನಿರ್ಧಾರವಾಗೋ ಸಾಧ್ಯತೆ ಇದೆ. ಹೀಗಾಗಿ, ಆಗಸ್ಟ್ 7ರವರೆಗೆ ಕಾದು ನೋಡಿ, ಮುಂದಿನ ನಿರ್ಧಾರ ಕೈಗೊಳ್ಳುವ ಪ್ಲಾನ್ ಹೈಕಮಾಂಡ್ಗಿದೆ. ಒಂದು ವೇಳೆ ಆಗಸ್ಟ್ 7ರಂದು ತೀರ್ಪು, ಅತೃಪ್ತರ ಪರ ಬಂದ್ರೆ, ಆಗಸ್ಟ್ 8ಕ್ಕೆ ಸಂಪುಟ ವಿಸ್ತರಣೆ ಆಗೋದು ಪಕ್ಕಾ.
ಈ ನಡುವೆ ಯಾರಿಗೆಲ್ಲಾ ಸಂಪುಟದಲ್ಲಿ ಸ್ಥಾನ ನೀಡಬೇಕು ಎಂಬ ಗೊಂದಲ ಪಕ್ಷದಲ್ಲಿ ತಲೆದೋರಿದೆ. ಅತೃಪ್ತ ಶಾಸಕರೇ 17 ಮಂದಿ ಇದ್ದು, ಯಾರಿಗೆ ಯಾವ ಸ್ಥಾನ ನೀಡಬೇಕು ಎಂಬ ಚರ್ಚೆ ಶುರುವಾಗಿದೆ. ಇನ್ನೂ, ಬಿಜೆಪಿ ಪಕ್ಷದಲ್ಲಿ ಇರುವವರು ಬಹಳಷ್ಟು ಹಿರಿಯರಿದ್ದಾರೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗಬೇಕು. ಹೀಗಾಗಿ, ಯಾರಿಗೆ ಮಂತ್ರಿ ಸ್ಥಾನ ನೀಡಬೇಕು ಎಂಬುದು ತಲೆನೋವಾಗಿ ಪರಿಣಮಿಸಿದೆ.
ಈಗಾಗಲೇ ಹೈಕಮಾಂಡ್ ಬಳಿಗೆ ಮಂತ್ರಿ ಆಕಾಂಕ್ಷಿಗಳ ಪಟ್ಟಿ ಹೋಗಿದ್ದು, ಆಗಸ್ಟ್ 8ರಂದೇ ಯಾರಿಗೆ ಮಂತ್ರಿ ಸ್ಥಾನ ಅನ್ನೋದು ಗೊತ್ತಾಗಲಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?