Featured
ಆಗಸ್ಟ್ 15ಕ್ಕೆ ಕಾಶ್ಮೀರದಲ್ಲಿ ಧ್ವಜಾರೋಹಣ ಮಾಡ್ತಾರಾ ಪ್ರಧಾನಿ ಮೋದಿ..?

ಜಮ್ಮು-ಕಾಶ್ಮೀರದಲ್ಲಿ 38 ಸಾವಿರ ಸೈನಿಕರ ನಿಯೋಜನೆ ಯಾಕೆ..?
ದೆಹಲಿಯ ಲಾಲ್ಕಿಲಾ ಬದಲು ಕಾಶ್ಮೀರದ ಲಾಲ್ಚೌಕ್ನಲ್ಲಿ ಧ್ವಜಾರೋಹಣ..?
ನವದೆಹಲಿ : ಹೀಗೊಂದು ಚಿಂತನೆ, ಆಲೋಚನೆ ಬರೋಕೆ ಕಾರಣ, ಕೇಂದ್ರ ಸರ್ಕಾರ 38 ಸಾವಿರ ಸೈನಿಕರನ್ನ ಜಮ್ಮು-ಕಾಶ್ಮೀರದಲ್ಲಿ ನಿಯೋಜಿಸಿದೆ. ಇದರಿಂದಾಗಿ ಪ್ರಧಾನಿ ನರೇಂದ್ರ ಮೋದಿ ಈ ಬಾರಿ ಕಾಶ್ಮೀರದಲ್ಲಿ ಧ್ವಜಾರೋಹಣ ಮಾಡ್ತಾರೆ ಅನ್ನೋ ಸುದ್ದಿ ಪ್ರಬಲವಾಗಿ ಹಬ್ಬಿದೆ. ಮತ್ತೊಂದೆಡೆ ಸಂವಿಧಾನದ 35ಎ ಹಾಗೂ 370ನೇ ವಿಧಿಯನ್ನು ರದ್ದುಗೊಳಿಸುವ ಹಿನ್ನೆಲೆಯಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ ಎಂಬ ಮಾತುಗಳು, ಚರ್ಚೆ ಕೂಡ ನಡೀತಿದೆ. ಆದ್ರೆ, ಇದೆಲ್ಲದಕ್ಕಿಂತ ಹೆಚ್ಚು ಚರ್ಚೆ ಆಗ್ತಿರೋ ವಿಷಯ, ಕಾಶ್ಮೀರದಲ್ಲಿ ಧ್ವಜಾರೋಹಣ.
ಈವರೆಗೆ ಸ್ವಾತಂತ್ರ್ಯೋತ್ಸವ ದಿನ ದೆಹಲಿಯ ಲಾಲ್ಕಿಲಾದಲ್ಲಿ ಪ್ರಧಾನಿ ಯಾರು ಇರ್ತಾರೋ ಅವ್ರು ಧ್ವಜಾರೋಹಣ ಮಾಡ್ತಿದ್ರು. ಆ ಸಂಪ್ರದಾಯಕ್ಕೆ ತೀಲಾಂಜಲಿ ಇಡಲು ಪ್ರಧಾನಿ ನರೇಂದ್ರ ಮೋದಿ ಮುಂದಾಗಿದ್ದಾರೆ ಎನ್ನಲಾಗಿದೆ. ಈಗಾಗಲೇ ಹಲವು ಅನಿರೀಕ್ಷಿತ ನಿರ್ಧಾರಗಳು, ಬೆಳವಣಿಗೆಗಳಿಂದ ಇಡೀ ದೇಶದ ಗಮನ ಸೆಳೆದಿರೋ ಪ್ರಧಾನಿ ಮೋದಿ, ಈ ರೀತಿಯ ಹೊಸ ನಿರ್ಧಾರ ಕೈಗೊಂಡರು ಅಚ್ಚರಿ ಇಲ್ಲ ಎನ್ನಲಾಗ್ತಿದೆ.
ಕಾಶ್ಮೀರದಲ್ಲಿ ಧ್ವಜಾರೋಹಣ ಮಾಡಿ, ಅಲ್ಲಿಂದ ದೇಶವನ್ನ ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತ್ನಾಡಿದ್ರೆ, ಪಾಕಿಸ್ತಾನಕ್ಕೆ ಖಡಕ್ ಸಂದೇಶ ನೀಡಿದಂತೆ ಆಗುತ್ತೆ. ಅಲ್ಲದೆ, ಭಯೋತ್ಪಾದನೆ ವಿರುದ್ಧ ಭಾರತ ಸಮರ ಸಾರುತ್ತೆ ಅನ್ನೋ ಸಂದೇಶವೂ ಹೋಗುತ್ತೆ. ಇದರಲ್ಲದೆ ಕಾಶ್ಮೀರ ಎಂದೆಂದಿಗೂ ಭಾರತದ ಅವಿಭಾಜ್ಯ ಅಂಗ. ಕಾಶ್ಮೀರ ಅಂದ್ರೆ, ಭಾರತ ಅನ್ನೋ ಭಾವನೆ ಕೂಡ ಮುಟ್ಟುತ್ತದೆ.
ಈಗಾಗಲೇ ಅಮೆರಿಕಾ ಅಧ್ಯಕ್ಷ ಡ್ರೊನಾಲ್ಡ್ ಟ್ರಂಪ್ ಕೂಡ ಗಪ್ಚುಪ್ ಆಗಿದ್ದಾರೆ. ಭಾರತ ಹೇಳಿದ್ರೆ ಮಾತ್ರ ಮಧ್ಯಪ್ರವೇಶ ಮಾಡೋದಾಗಿ ಟ್ರಂಪ್ ಹೇಳಿದ್ದು, ಪಾಕಿಸ್ತಾನಕ್ಕೆ ಹಿನ್ನಡೆಯಾಗಿದೆ. ಒಟ್ನಲ್ಲಿ ಈಗಾಗಲೇ ಭಾರತೀಯ ಸೇನೆಯ 38 ಸೈನಿಕರು ಕಾಶ್ಮೀರದಲ್ಲಿ ಬೀಡು ಬಿಟ್ಟಿದ್ದಾರೆ. ಪ್ರಧಾನಿ ಮೋದಿ ನಿರ್ಧಾರ ಏನಾಗಿರುತ್ತೆ ಅನ್ನೋದು ಕುತೂಹಲ ಮೂಡಿಸಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?