ಹೆಸರುಕಾಳು ಹಾಗೂ ಹೆಸರು ಬೇಳೆ ಆರೋಗ್ಯಕ್ಕೆ ತುಂಬಾ ಒಳ್ಳೇಯದು. ಅದರಲ್ಲೂ ಉಷ್ಣಾಂಶ ಹೆಚ್ಚಾಗಿದ್ದಾಗ ಹೆಸರುಕಾಳ ಮತ್ತು ಹೆಸರು ಬೇಳೆ ಉಷ್ಣಾಂಶವನ್ನ ಕಡಿಮೆ ಮಾಡುತ್ತೆ. ಹೆಸರುಕಾಳನ್ನ ಬೇಯಿಸೋ ಬದಲು, ಮೊಳಕೆ ಕಟ್ಟಿ ಪಲ್ಯ ಮಾಡಿಕೊಂಡು ತಿನ್ನಿದ್ರೆ, ಆರೋಗ್ಯಕ್ಕೆ ಮತ್ತಷ್ಟು ಒಳ್ಳೇದು, ಹಾಗಿದ್ರೆ, ಮೊಳಕೆ ಹೆಸರುಕಾಳು ಪಲ್ಯ ಮಾಡೋದು ಹೇಗೆ ಅಂತ ನೋಡೋಣ.
ಬೇಕಾಗುವ ಪದಾರ್ಥಗಳು :
ಮೊಳಕೆ ಕಟ್ಟಿದ ಹೆಸರುಕಾಳು -1 ಕಪ್
ಟೊಮೊಟೋ – – 1
ಕೆಂಪು ಮೆಣಸಿನಕಾಯಿ – – 3
ಧನಿಯಾ ಪುಡಿ – – 1 ಚಮಚ
ಅರಿಶಿನ -ಸ್ವಲ್ಪ
ಎಣ್ಣೆ – – 2 ಚಮಚ
ಸಾಸಿವೆ -1/2 ಚಮಚ
ಕರಿಬೇವು – – 2 ಎಸಲು
ಹಸಿ ತೆಂಗಿನಕಾಯಿ -1/2 ಬಟ್ಟಲು
ಕೊತ್ತಂಬರಿ ಸೊಪ್ಪು – – ಸ್ವಲ್ವ
ಉಪ್ಪು – – ರುಚಿಗೆ ತಕ್ಕಷ್ಟು
ಮಾಡುವ ವಿಧಾನ : ಮೊದಲು ಹೆಸರುಕಾಳಿಗೆ ಸ್ವಲ್ಪ ನೀರು ಮತ್ತು ಉಪ್ಪನ್ನು ಹಾಕಿ ಹದವಾಗಿ ಬೇಯಿಸಿಕೊಳ್ಳಿ. ಒಂದು ಬಾಣಲೆಯಲ್ಲಿ ಎಣ್ಣೆಯನ್ನು ಕಾಯಿಸಿ. ಕಾದ ಎಣ್ಣೆಗೆ ಸಾಸಿವೆ, ಕರಿಬೇವು ಹಾಕಿ. ಇದಕ್ಕೆ ಸಣ್ಣದಾಗಿ ಹೆಚ್ಚಿದ ಟೊಮೊಟೋವನ್ನು ಹಾಕಿ ಮೆತ್ತಗಾಗುವವರೆಗೂ ಬೇಯಿಸಿಕೊಳ್ಳಿ. ಬೆಂದ ಟೊಮೊಟೋಗೆ ಕೆಂಪು ಮೆಣಸಿನಕಾಯಿ ಪುಡಿ, ಧನಿಯಾ ಪುಡಿ, ಅರಿಶಿನ ಪುಡಿ ಸೇರಿಸಿ. ಆನಂತರ ಇದಕ್ಕೆ ಹೆಸರುಕಾಳನ್ನು ಹಾಕಿ 5 ನಿಮಿಷ ಬೇಯಿಸಿ. ಕೊನೆಯದಾಗಿ, ಕೊತ್ತಂಬರಿ ಸೊಪ್ಪು, ಹಸಿ ತೆಂಗಿಕಾಯಿ ತುರಿಯನ್ನು ಸೇರಿಸಿದರೆ ರುಚಿಯಾದ ಮೊಳಕೆ ಹೆಸರುಕಾಳು ಪಲ್ಯ ರೆಡಿ. ಇದನ್ನು ಚಪಾತಿ, ಅನ್ನ ಸಾರಿನ ಜೊತೆಗೆ ತಿನ್ನಲು ರುಚಿಯಾಗಿರುತ್ತದೆ. ಬರೀ ಮೊಳಕೆ ಹೆಸರುಕಾಳು ಪಲ್ಯವನ್ನೂ ಸವಿಯಬಹುದು. ಸೋ, ಈಗಲೇ ಟ್ರೈ ಮಾಡಿ..
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?