ರೈಸಿಂಗ್ ಕನ್ನಡ :- ಒಣ ಅಂಜೂರದಲ್ಲಿ ಹಲವಾರು ರೀತಿಯ ಪೋಷಾಕಾಂಶಗಳಿದ್ದು, ಇದು ಆರೋಗ್ಯ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿರುತ್ತದೆ. ಅಂಜೂರದ ಜ್ಯೂಸ್ ಕುಡಿಯುವುದರಿಂದ ಏನೆಲ್ಲಾ ಲಾಭಗಳು ಇವೆ ಎಂದು ತಿಳಿಯೋಣ.
ಅಂಜೂರ ಜ್ಯೂಸ್ ನಲ್ಲಿ ವಿಟಮಿನ್ ಸಿ, ಖನಿಜಾಂಶಗಳಾಗಿರುವ ಪೊಟಾಶಿಯಂ, ಕ್ತಾಲ್ಸಿಯಂ ಮತ್ತು ಪೋಸ್ಟರ್ ಇರುತ್ತದೆ. ಇದು ಮಿತವಾಗಿ ವಿರೇಚಕ ಗುಣ ಹೊಂದಿದ್ದು, ಕರಗುವ ನಾರಿನಾಂಶವು ಸಮೃದ್ಧವಾಗಿರುತ್ತದೆ. ಪೈಥೋನ್ಯೂಟ್ರಿಯೆಂಟ್ಸ್ ಮತ್ತು ಆಂಟಿಆಕ್ಸಿಡೆಂಟ್ ಕೂಡ ಸಮೃದ್ಧವಾಗಿದೆ. ಯಕೃತ್ ನಲ್ಲಿನ ತೊಂದರೆಗಳನ್ನು ನಿವಾರಣೇ ಮಾಡುವುದರಲ್ಲಿ ಸಹಾಯ ಮಾಡುತ್ತದೆ.
ತೂಕ ಇಳಿಕೆಗೆ ಸಹಾಯ ಮಾಡುತ್ತದೆ ಅಂಜೂರ
ತೂಕ ಇಳಿಸುವವರು ದಿನಕ್ಕೊಂದು ಆಹಾರ ಮಾಡುವ ಬದಲು ನಿಯಮಿತವಾಗಿ ಅಂಜೂರ ಜ್ಯೂಸ್ ಕುಡಿದರೆ ತುಂಬಾ ಲಾಭಕಾರಿ. ಇದರಲ್ಲಿ ಆಹಾರದ ನಾರಿನಾಂಶ ಮತ್ತು ಕಡಿಮೆ ಕ್ಯಾಲರಿಗಳು ಇರುತ್ತದೆ.
ಅಧಿಕ ನಾರಿನಾಂಶವಿರುವ ಕಾರಣದಿಂದಾಗಿ ಇದು ದೀರ್ಘಕಾಲ ಹೊಟ್ಟೆ ತುಂಬಿದಂತೆ ಮಾಡುವುದು ಹಾಗೂ ಪದೇ ಪದೇ ಹಸಿವಾಗುವುದನ್ನು ತಡೆಯುತ್ತದೆ.
ಅ.ಜೂರ ನೈಸರ್ಗಿಕ ವಿರೇಚಕ ಗುಣ ಹೊಂದಿರುವ ಕಾರಣದಿಂದಾಗಿ ದೇಹದಲ್ಲಿರುವ ವಿಷಕಾರಿ ಅಂಶವನ್ನು ಹೊರಗೆ ಹಾಕುತ್ತದೆ.
ಅಂಜೂರ ತಿನ್ನುವುದರಿಂದ ರಕ್ತದಿತ್ತಡ ತಗ್ಗಿಸುತ್ತದೆ
ಅಧಿಕ ರಕ್ತದೊತ್ತಡ ಸಮಸ್ಯೆ ಇರುವವರು ಕೂಡ ಹಲವಾರು ಆಹಾರಗಳನ್ನು ತ್ಯಜಿಸಬೇಕು. ಆದರೆ ಅಂಜೂರ ಜ್ಯೂಸ್ ಕುಡಿದರೆ ಅವರಿಗೆ ಇದು ಒಳ್ಳೆಯದು. ಇದರಲ್ಲಿ ಪೊಟ್ಯಾಷಿಯಂ ಹೆಚ್ಚಾಗಿರುತ್ತದೆ.
ನಮ್ಮ ದೇಹಕ್ಕೆ ಪೊಟ್ಯಾಷಿಯಂ ಅಗತ್ಯವಾಗಿರುವುದರಿಂದ ಖನಿಜಾಂಶ ಮತ್ತು ಅಂಜೂರ ನಿಯಮಿತವಾಗಿ ಸೇವನೆ ಮಾಡಿದರೆ ಅದರಿಂದ ರಕ್ತದೊತ್ತಡ ನಿಯಂತ್ರಣದಲ್ಲಿಡಲು ಸಾಧ್ಯವಾಗುತ್ತದೆ.
ಜಾಸ್ತಿ ಸೋಡಿಯಂ ಇರುವಂತಹ ಸಂಸೃರಿತ ಆಹಾರ ಸೇವನೆ ಮಾಡುವವರು ಪೊಟ್ಯಾಷಿಯಂ ಅಧಿಕ ಸೇವನೆ ಮಾಡಬೇಕು. ಇದರಿಂದ ರಕ್ತ ಸಂಚಾರವು ಉತ್ತಮವಾಗುತ್ತದೆ ಮತ್ತು ಜೀರ್ಣಕ್ರಿಯೆ ಸಂಬಂಧಿ ಕಾಯಿಲೆಗಳು ದೂರಾವಾಗುತ್ತವೆ.
ಅಂಜೂರ ತಿನ್ನುವುದರಿಂದ ಮಧುಮೇಹವನ್ನು ತಪ್ಪಿಸಬಹುದು
1 ಮಧುಮೇಹ ಬರದಂತೆ ತಪ್ಪಿಸಬೇಕಾದರೆ ಆಗಾಗ ಆಹಾರ ಕ್ರಮದಲ್ಲಿ ಅಂಜೂರ ಜ್ಯೂಸ್ ಕುಡಿಯಬೇಕು.
2 ಅಂಜೂರದಲ್ಲಿ ಅತ್ಯಧಿಕ ಪ್ರಮಾಣದ ಕ್ಲೋರೊಜೆನಿಕ್ ಆಮ್ಲವಿದೆ ಮತ್ತು ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಮತೋಲನದಲ್ಲಿ ಇಡಲು ಸಹಾಯ ಮಾಡುತ್ತದೆ.
3 ಮಧುಮೇಹ ಬರದಂತೆ ತಡೆಯಲು ಅಂಜೂರ ಜ್ಯೂಸ್ ನ್ನು ಸೇವನೆ ಮಾಡಿದರೆ ಅದು ತುಂಬಾ ಲಾಭವಾಗುತ್ತದೆ.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?