ಬೆಂಗಳೂರು: ಹಿಂದಿ ದಿವಸ್ ಆಚರಣೆಯ ಉದ್ದೇಶ ಏನು? ರಾಜ್ಯಗಳ ಒಕ್ಕೂಟವೇ ಭಾರತವಾಗಿರುವಾಗ ಹಿಂದಿಯನ್ನು ವೈಭವಿಕರಿಸುವುದನ್ನ ಕನ್ನಡಿಗರು ಸಹಿಸುವುದಿಲ್ಲ ಎಂದು ಕರವೇ ನಾರಾಯಣಗೌಡ ಎಚ್ಚರಿಸಿದ್ದಾರೆ.
ಹಿಂದಿ ದಿವಸ್ ಆಚರಣೆ ಮೊದಲು ರದ್ದು ಮಾಡಬೇಕು, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಿಂದಿ ವ್ಯಾಮೋಹವನ್ನು ಇಂದು ತೋರ್ಪಡಿಸಿದ್ದಾರೆ, ಹಿಂದಿಯಿಂದ ರಾಷ್ಟ್ರದ ಉದ್ಧಾರ ಎಂದಿದ್ದಾರೆ, ಆದರೆ ಅನೇಖ ಭಾಷೆ ರಾಜ್ಯಗಳ ಒಕ್ಕೂಟವೇ ಭಾರತ, ಹೀಗಾಗಿ ಹಿಂದಿ ವ್ಯಾಮೋಹವನ್ನು ಮೊದಲಿಗೆ ಬಿಡಿ, ಒಕ್ಕೂಟದ ವ್ಯವಸ್ಥೆಗೆ ಗೌರವ ನೀಡಿ, ಬ್ಯಾಂಕಿಂಗ್ ನೇಮಕಾತಿಯಲ್ಲೂ ಹಿಂದಿ ಹೇರಿಕೆ ಮಾಡಲಾಗುತ್ತಿರುವುದು ಕನ್ನಡಿಗರಿಗೆ ಮಾಡುತ್ತಿರುವ ಅನ್ಯಾಯ, ಪ್ರಾದೇಶಿಕ ಭಾಷೆಯಲ್ಲಿ ಬ್ಯಾಂಕ್ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿದರು.