ನವದೆಹಲಿ: ಪಕ್ಷದ ಕಾರ್ಯಕರ್ತರ ಶ್ರಮದಿಂದ ಬೆಳೆದೆ, ಉಪ್ಪು ತಿಂದರೆ ನೀರು ಕುಡಿಲೇ ಬೇಕು, ಹಾಗೇನಾದರೂ ಇದ್ದರೆ ನಾನು ಸಿದ್ಧ, ಎಲ್ಲಿಯೂ ಓಡಿಹೋಗುವವನು ನಾನಲ್ಲ, ಬಹಳ ಜನ ಸಂತೋಷ ಪಡ್ತಿದ್ದಾರೆ, ದುಃಖತಪ್ತರೂ ಆಗಿದ್ದಾರೆ. ಯಾರ ಬಳಿಯೂ ಒಂದು ರೂಪಾಯಿಯನ್ನೂ ಪಡೆದಿಲ್ಲ, ಲಂಚ ಹೊಡಿಲಿಲ್ಲ, ಮೋಸ ಮಾಡಿಲ್ಲ, ಕಳ್ಳತನ ಮಾಡಿಲ್ಲ, ಒತ್ತುವರಿ ಮಾಡಿಲ್ಲ, ಅಧಿಕಾರ ದುರುಪಯೋಗ ಮಾಡಿಕೊಂಡಿಲ್ಲ, ಆದರೆ ನನ್ನನ್ನ ಸಂಕಷ್ಟಕ್ಕೆ ಸಿಲುಕಿಸಿದ್ದಾರೆ.
ಇಂದು ನಾನು ಕಣ್ಣೀರು ಹಾಕುತ್ತಿರೋದು ನನ್ನ ಪೂರ್ವಿಕರಿಗೆ ಪೂಜೆ ಮಾಡಲು ಆಗಲಿಲ್ಲ. ಈ ಪೂಜೆಯಲ್ಲಿ ನನ್ನ ತಂದೆಯನ್ನೂ ಸೇರಿದಂತೆ ಹಿರಿಯರಿಗೆ ಎಡೆ ಇಟ್ಟು ಪೂಜಿಸುವ ಸಂಪ್ರದಾಯ ಇತ್ತು. ಆದರೆ ನನಗೆ ಹೋಗದಂತೆ ಸಿಲುಕಿಸಿದ್ದಾರೆ. ನಮ್ಮ ಪೂರ್ವಿಕರಿಗೆ ಶಾಂತಿ ಸಿಗಲಿ ಎಂದು ಇಲ್ಲಿಂದಲೇ ಪ್ರಾರ್ಥಿಸಿಕೊಳ್ಳುತ್ತೇನೆ. ಎಲ್ಲರನ್ನೂ ಬಿಟ್ಟು ನನ್ನನ್ನ ಸಿಲುಕಿಸಿದ್ದಾರೆ. ವಿಘ್ನವಿನಾಶಕ ಕಾಪಾಡ್ತಾನೆ, ಎಲ್ಲದನ್ನ ಅರಿತೇ ಇಲ್ಲಿಗೆ ಬಂದಿದ್ದೇನೆ ಎಂದರು. ಇಂದೂ ಕೂಡ ಡಿಕೆ ಶಿವಕುಮಾರ್ ರನ್ನ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ. ದೆಹಲಿಯಲ್ಲಿ ಸಹೋದರ ಹಾಗೂ ಸಂಸದ ಡಿಕೆ ಸುರೇಶ್ ಮನೆಯಲ್ಲಿ ವಾಸ್ತವ್ಯ ಹೂಡಿದ್ದಾರೆ
ಬ್ರಾಂಡ್ ಬೆಂಗಳೂರು ಬೆಟರ್ ಬೆಂಗಳೂರು : ಡಿಕೆಶಿ
ಸೋನಿಯಾ ಗಾಂಧಿ ತುಂಬಿದ ಧೈರ್ಯದಿಂದ ಆತ್ಮವಿಶ್ವಾಸ ಇಮ್ಮಡಿಯಾಯ್ತು – ಭಾಷಣದಲ್ಲಿ ಭಾವುಕರಾದ ಡಿಕೆಶಿ
ಪ್ರತಿಜ್ಞಾಗೆ ಭಾರೀ ಸಿದ್ಧತೆ – ಕಾರ್ಯಕರ್ತರಿಗೆ ತಮ್ಮ ತಮ್ಮ ಸ್ಥಳದಿಂದಲೇ ಆಶೀರ್ವದಿಸಲು ಡಿಕೆಶಿ ಮನವಿ
ಡಿ.ಕೆ ಶಿವಕುಮಾರ್ ಪ್ರತಿಜ್ಞಾ ದಿನ ಹೇಗಿರುತ್ತೆ? – ಇಲ್ಲಿದೆ ಕಾರ್ಯಕ್ರಮದ ಸಂಪೂರ್ಣ ಮಾಹಿತಿ..!
ಜನಾನುರಾಗಿ ಸತೀಶ್ ಬಂದಿವಡ್ಡರ್- ಮುಧೋಳ ಜನ ಮೆಚ್ಚಿದ ಕಾಂಗ್ರೆಸ್ ಲೀಡರ್
ಡಿಕೆಶಿ ಮನೆ ಪಕ್ಕವೇ ಮನೆ ಖರೀದಿ ಬಗ್ಗೆ ನೋ ಕಾಮೆಂಟ್ಸ್ – ರಾಜಕೀಯವೇ ಬೇರೆ, ಕುಟುಂಬದ ವಿಷಯವೇ ಬೇರೆ: ರಮೇಶ್ ಜಾರಕಿಹೊಳಿ