ಬೆಂಗಳೂರು – ಸಾಮಾನ್ಯನಲ್ಲಿ ಸಾಮಾನ್ಯನು ರಾಜ್ಯದ ಸಚಿವನಾಗಬಹುದು ಅನ್ನೋದನ್ನ ಸಾಧಿಸಿ ತೋರಿಸಿದ ಭಟ್ಕಳದ ಮಂಕಾಳು ವೈದ್ಯ, ತಮ್ಮ ಕೆಲಸ ಕಾರ್ಯಗಳಿಂದಲೇ ಸಾಕಷ್ಟು ಸುದ್ದಿಯಾಗುತ್ತಿದ್ದಾರೆ. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಕೇವಲ ಜನಸೇವೆಯೇ ಜನಾರ್ಧನ ಸೇವೆ ಅನ್ನೋ ರೀತಿ ಸಮಾಜ ಸೇವೆ ಮಾಡಿಕೊಂಡು ಬಂದ ಮಂಕಾಳು ವೈದ್ಯರು ಇದೀಗ ರಾಜ್ಯ ಸಚಿವರಾಗಿದ್ದಾರೆ. ಶಕ್ತಿ ಯೋಜನೆಯನ್ನ ಸಾಮಾನ್ಯರ ಕೈಯಲ್ಲೇ ಉದ್ಘಾಟಿಸಿದ ಮೀನುಗಾರಿಕೆ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಮಂಕಾಳು ವೈದ್ಯ, ಇದೀಗ ವಿಧಾನಸೌಧದಲ್ಲಿ ತಮ್ಮ ಕಚೇರಿಯಲ್ಲಿ ವಿಶೇಷ ಪೂಜೆ ನೆರವೇರಿಸೋದ್ರ ಮೂಲಕ, ಕಚೇರಿಗೆ ಪ್ರವೇಶಿಸಿದರು.
ತಮ್ಮ ಜಿಲ್ಲೆಯವರೇ ಆದ, ಹಿರಿಯ ರಾಜಕಾರಣಿ ಹಾಗು ಮಾಜಿ ಸಚಿವರು, ಹಾಲಿ ಶಾಸಕರು ಆಗಿರುವ ಕಾಂಗ್ರೆಸ್ನ ಹಿರಿಯ ನಾಯಕರು ಆರ್.ವಿ ದೇಶಪಾಂಡೆ ಅವರ ಆಶೀರ್ವಾದ ಪಡೆದು ತಮ್ಮ ಸಚಿವರ ಕುರ್ಚಿಯಲ್ಲಿ ಆಸೀನರಾಜರು. ಈ ಸಂದರ್ಭದಲ್ಲಿ ಉತ್ತರ ಕನ್ನಡ ಜಿಲ್ಲೆಯ ಸಾಕಷ್ಟು ಕಾಂಗ್ರೆಸ್ ಕಾರ್ಯಕರ್ತರು, ನಾಯಕರುಗಳು ಸಚಿವ ಮಂಕಾಳು ವೈದ್ಯರಿಗೆ ಶುಭಹಾರೈಸಿದರು.
ಯಲ್ಲಾಪುರ ಕಾಂಗ್ರೆಸ್ ಮುಖಂಡರ ಶ್ರೀನಿವಾಸ ಭಟ್ ದಾತ್ರಿ, ಮಂಕಿ ಬ್ಲಾಕ್ ಅಧ್ಯಕ್ಷ ಗೋವಿಂದ ನಾಯ್ಕ , ಭಟ್ಕಳ ಬ್ಲಾಕ್ ಅಧ್ಯಕ್ಷ ವೆಂಕಟೇಶ ನಾಯ್ಕ ಸೇರಿದಂತೆ ಭಟ್ಕಳ ಹೊನ್ನಾವರ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು, ಪಕ್ಷದ ಪ್ರಮುಖರು, ವೈದ್ಯರ ಅಭಿಮಾನಿಗಳು, ಜಿಲ್ಲೆಯ ಪ್ರಮುಖ ನಾಯಕರುಗಳು ಹಾಜರಿದ್ದು ಶುಭ ಹಾರೈಸಿದರು.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?