ಬೆಂಗಳೂರು : ದುಬಾರಿ ದಂಡದಿಂದ ಇಡೀ ರಾಜ್ಯದ ಜನತೆ ಕಂಗೆಟ್ಟಿದ್ದು, ಏನಪ್ಪ ನಮ್ಮ ಕಥೆ ಹೀಗಾದ್ರೆ ಅಂತ ಚಿಂತೆಗೀಡಾಗಿದ್ದಾರೆ. ಈ ನಡುವೆ, ಗುಜರಾತ್ನಲ್ಲಿ ದಂಡ ಪ್ರಮಾಣ ಕಡಿಮೆ ಮಾಡಿದ್ದೂ, ರಾಜ್ಯದಲ್ಲೂ ಫೈನ್ ಪ್ರಮಾಣ ಕಡಿಮೆ ಮಾಡೋ ಸಾಧ್ಯತೆ ಇದೆ. ಈ ಕುರಿತು ಅಧಿಕಾರಿಗಳ ಜೊತೆ ಮಾತುಕತೆ ನಡೆಸಿರೋ ಸಿಎಂ ಯಡಿಯೂರಪ್ಪ, ಹೊಸ ನಿಯಮಗಳು ಹಾಗೂ ಸಾಧ್ಯಾಸಾಧ್ಯತೆಗಳನ್ನ ಪರಿಶೀಲಿಸುವಂತೆ ಯಡಿಯೂರಪ್ಪ ಸೂಚನೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಇವತ್ತು ಅಧಿಕಾರಿಗಳ ಜೊತೆ ಸಭೆ ನಡೆಸಿ ಮಾತ್ನಾಡಿದ ಸಿಎಂ ಯಡಿಯೂರಪ್ಪ, ಗುಜರಾತ್ ಸರ್ಕಾಋ ಹೊರಡಿಸಿರೋ ಆದೇಶದ ಬಗ್ಗೆ ಪರಿಶೀಲನೆಗೆ ಅಧಿಕಾರಿಗಳಿಗೆ ಸೂಚಿಸಿರೋದಾಗಿ ತಿಳಿಸಿದ್ರು. ಸಂಚಾರ ನಿಯಮ ಹಾಗೂ ಮೋಟಾರು ವಾಹನ ಕಾಯ್ದೆ ಉಲ್ಲಂಘನೆಗೆ ಸಂಬಂಧಿಸಿದ ಮೊತ್ತವನ್ನ ಗುಜರಾತ್ ಸರ್ಕಾರ ಶೇಕಡಾ 50ರಷ್ಟು ಇಳಿಸಿ ಆದೇಶಿಸಿತ್ತು.
ಇಂದಿನ ಸಾರಿಗೆ ಇಲಾಖೆ ಕುರಿತ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆದಿದ್ದು, ಅಧಿಕಾರಿಗಳಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸಿಎಂ ಯಡಿಯೂರಪ್ಪ ಸೂಚನೆ ನೀಡಿದ್ದಾರೆ. ಅಧಿಕಾರಿಗಳು ಒಂದು ಹಂತದಲ್ಲಿ ಪರಿಶೀಲನೆ ನಡೆಸಿ, ರಾಜ್ಯದಲ್ಲೂ ಗುಜರಾತ್ ಮಾದರಿಯಂತೆ ಸದ್ಯ ಇರುವ ದುಬಾರಿ ದಂಡವನ್ನ ಶೇಕಡಾ 50ರಷ್ಟು ಇಳಿಸುವ ಸಾಧ್ಯತೆ ಇದೆ.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?