ಸೋಲಾಪುರ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆಯೇ ರಾಜಕೀಯ ಪಕ್ಷಗಳ ಗುದ್ದಾಟ ಜೋರಾಗಿದೆ, ಆಗಸ್ಟ್ ೧ರಿಂದ ಆರಂಭವಾದ ಎರಡನೇ ಹಂತದ ಬಿಜೆಪಿ ಪಕ್ಷದ ಮಹಾಜನಾದೇಶ ಯಾತ್ರೆ ಭಾನುವಾರ ಸೋಲಾಪುರದಲ್ಲಿ ಮುಕ್ತಾಯಗೊಂಡಿತು.
ಬೃಹತ್ ಸಭೆಯಲ್ಲಿ ಎಸ್ಸಿಪಿ ಹಾಗೂ ಕಾಂಗ್ರೆಸ್ನ ಹಲವು ನಾಯಕರನ್ನ ಬಿಜೆಪಿಗೆ ಬರ ಮಾಡಿಕೊಂಡ ಅಮಿತ್ ಶಾ, ಈ ಪಕ್ಷಗಳ ಮುಖಂಡರಾದ ಶರದ್ ಪವಾರ್ ಹಾಗೂ ಪೃಥ್ವಿರಾಜ್ ಚೌವ್ಹಾಣ್ ರನ್ನ ಕುಟುಕಿದರು. ಬಿಜೆಪಿ ಏನಾದರೂ ಪೂರ್ಣ ಬಾಗಿಲನ್ನ ತೆರೆದರೆ, ಶರದ್ ಪವಾರ್ ( ಎನ್ಸಿಪಿ) ಹಾಗೂ ಪೃಥ್ವಿರಾಜ್ ಜೌವ್ಹಾಣ್ ( ಕಾಂಗ್ರೆಸ್) ಹೊರತುಪಡಿಸಿ ಆ ಪಕ್ಷಗಳಲ್ಲಿ ಯಾರೂ ಉಳಿಯೋದಿಲ್ಲ, ಎಲ್ಲರೂ ಬಿಜೆಪಿಯಲ್ಲಿರ್ತಾರೆ ಎಂದು ಗುಡುಗಿದ್ದಾರೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯನ್ನೂ ಸೇರಿಸಿಕೊಂಡು ಹಲವರಿಗೆ ಬಹಿರಂಗ ಸವಾಲೆಸೆದಿದ್ದಾರೆ. ಮಹಾರಾಷ್ಟ್ರ ಚುನಾವಣಾ ಪ್ರಚಾರಕ್ಕೆ ಆಗಮಿಸುವ ಮುನ್ನ ರಾಹುಲ್ ಗಾಂಧಿ ಹಾಗೂ ಎನ್ ಸಿ ಪಿ ಶರದ್ ಪವಾರ್ ಜಮ್ಮು ಕಾಶ್ಮೀರ ವಿಶೇಷಾಧಿಕಾರ ( ಆರ್ಟಿಕಲ್ ೩೭೦) ಬಗ್ಗೆ ತಮ್ಮ ಸ್ಪಷ್ಟ ನಿಲುವು ಬಹಿರಂಗಪಡಿಸಬೇಕು ಎಂದು ತಾಕೀತು ಮಾಡಿದ್ದಾರೆ.
ಕೋವಿಡ್-19 ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿದ ಸಿ.ಎಂ. ಯಡಿಯೂರಪ್ಪ
ಕರ್ನಾಟಕಕ್ಕೆ ಆಗಮಿಸಿದ ಕೇಂದ್ರ ಗೃಹಸಚಿವ
ಸಂಕ್ರಾಂತಿಗೆ ಸಚಿವ ಸಂಪುಟ ವಿಸ್ತರಣೆಯೋ.? ಪುನಾರಚನೆಯೋ..? : ಮಿನಿಸ್ಟರ್ ಆಕಾಂಕ್ಷಿಗಳಲ್ಲಿ ಹೆಚ್ಚಿದ ಉತ್ಸಾಹ..!
ಸಿದ್ದರಾಮಯ್ಯಗೆ ಕಾಮನ್ ಸೆನ್ಸ್ ಇಲ್ಲ, ಹುಚ್ಚುತನದ ಪರಮಾವಧಿ : ಸಿದ್ದು ವಿರುದ್ಧ ಯಡಿಯೂರಪ್ಪ ಕೆಂಡಾಮಂಡಲ..!
ಮಿಸ್ಟರ್ ಯಡಿಯೂರಪ್ಪ, ಅಮಿತ್ ಶಾ ರಾಜೀನಾಮೆ ನೀಡಲಿ : ಸಿದ್ದರಾಮಯ್ಯ
ಅನರ್ಹರನ್ನು ಅಮಿತ್ ಶಾ ಬಾಂಬೆಯಲ್ಲಿ ಇಟ್ಟಿದ್ರು : ಯಡಿಯೂರಪ್ಪ ಸ್ಫೋಟಕ ಆಡಿಯೋ ಬಹಿರಂಗ