Bengalore : ಬಿಬಿಎಂಪಿ ಆಸ್ತಿ ತೆರಿಗೆ ವಂಚಕರ ವಿರುದ್ಧ ಸಮರ ಸಾರಿದೆ. ಕೋಟಿ ಕೋಟಿ ಆಸ್ತಿ ತೆರಿಗೆ ಉಳಿಸಿಕೊಂಡವರಿಗೆ ಶಾಕ್ ನೀಡಿ ತೆರಿಗೆ ವಸೂಲಿ ಮಾಡೋಕೆ ಬಿಬಿಎಂಪಿ ನಾನಾ ಕಸರತ್ತು ನಡೆಸುತ್ತಿದೆ. ತೆರಿಗೆ ವಂಚಕರ ಮೇಲೆ ಬಿಬಿಎಂಪಿ ಇದೀಗ ಮತ್ತೊಂದು ಬ್ರಹ್ಮಾಸ್ತ್ರ ಬಿಡೋಕೆ ಸಜ್ಜಾಗಿದೆ. ತೆರಿಗೆ ಕಟ್ರಿ ಅಂತ ಬಿಬಿಎಂಪಿ ಎಷ್ಟು ಬಾರಿ ನೋಟಿಸ್ ಕೊಟ್ರು ಆಸ್ತಿ ಮಾಲೀಕರು ಡೋಂಟ್ ಕೇರ್ ರೀತಿ ವರ್ತಿಸುತ್ತಿದ್ರು.
ಹೇಗಾದ್ರೂ ಮಾಡಿ ಆಸ್ತಿ ತೆರಿಗೆ ಸಂಗ್ರಹ ಮಾಡಲೇಬೇಕು ಅಂತ ಡಿಸೈಡ್ ಮಾಡಿರುವ ಬಿಬಿಎಂಪಿ ಒಂದರ ಹಿಂದೆ ಒಂದರಂತೆ ಅಸ್ತ್ರಗಳನ್ನ ಪ್ರಯೋಗ ಮಾಡುತ್ತಲೇ ಇದೆ. ಇದೀಗ ಆಸ್ತಿ ತೆರಿಗೆ ಸಂಗ್ರಹಕ್ಕಾಗಿ ವಂಚಕರ ಪಟ್ಟಿಯನ್ನ ತನ್ನ ವೆಬ್ ಸೈಟ್ ನಲ್ಲಿ ಬಿಡುಗಡೆ ಮಾಡಿದೆ. ಬಿಬಿಎಂಪಿಯ 8 ವಲಯಗಳಲ್ಲಿ ತೆರಿಗೆ ಕಟ್ಟದೆ ಡಿಫಾಲ್ಟರ್ ಲಿಸ್ಟ್ ಮಾಡಿ ವೆಬ್ ಸೈಟ್ ನಲ್ಲಿ ಹಾಕಿದೆ.
ಪ್ರತಿ ವಲಯದಲ್ಲೂ ಟಾಪ್ 50 ತೆರಿಗೆ ವಂಚಕರ ಪಟ್ಟಿಯನ್ನ ಬಿಡುಗಡೆ ಮಾಡಿದ್ದು, ಕೋಟಿ ಕೋಟಿ ಲೆಕ್ಕದಲ್ಲಿ ತೆರಿಗೆ ಬಾಕಿ ಇದೆ. ಕೋಟ್ಯಾಂತರ ರೂಪಾಯಿ ವ್ಯವಹಾರ ಮಾಡಿ, ಕೋಟಿಗಟ್ಟಲೇ ಸಂಪಾದಿಸುವ ಕಂಪನಿಗಳೇ ತೆರಿಗೆ ಕಟ್ಟಿಲ್ಲ ಅಂದ್ರೆ ಹೇಗೆ..ಇನ್ನು ಯಾರಾದ್ರೂ ಜನಸಾಮಾನ್ಯರು ಮನೆ ಕಂದಾಯ ಬಾಕಿ ಉಳಿಸಿಕೊಂಡ್ರೆ, ಮನೆ ಬಾಗಿಲಿಗೆ ಬಂದು ವಸೂಲಿ ಮಾಡುವ ಬಿಬಿಎಂಪಿ ಸಿಬ್ಬಂದಿಗಳು, ದೊಡ್ಡವರನ್ನ ಮುಟ್ಟೋಕೆ ಹಿಂದೇಟು ಹಾಕುತ್ತಿದ್ರು..ಹೀಗಾಗಿಯೇ ತೆರಿಗೆ ಕೋಟಿ ಲೆಕ್ಕದಲ್ಲಿ ಬಾಕಿ ಉಳಿದಿದೆ.
ಬೊಮ್ಮನಹಳ್ಳಿ, ದಾಸರಹಳ್ಳಿ,ಪೂರ್ವ ಮಹದೇವಪುರ,ಆರ್ ಆರ್ ನಗರ, ದಕ್ಷಿಣ ,ಪಶ್ಚಿಮ ಹಾಗೂ ಯಲಹಂಕ ವಲಯಗಳ ವ್ಯಾಪ್ತಿಯಲ್ಲಿರುವ ತೆರಿಗೆ ವಂಚಕರ ಪಟ್ಟಿಯನ್ನ ಇದೀಗ ಬಿಬಿಎಂಪಿ ಬಿಡುಗಡೆ ಮಾಡಿದೆ. ಯಲಹಂಕ ವಲಯದಲ್ಲಿ 7758795 ಕೋಟಿ ಬಾಕಿ ಇದೆ. ದಕ್ಷಿಣ ವಲಯದಲ್ಲಿ 125537345 ಕೋಟಿ ಹಣ ತೆರಿಗೆ ಬರಬೇಕಿದೆ. ಇನ್ನು ಬೊಮ್ಮನಹಳ್ಳಿ ವಲಯದಲ್ಲಿ 31807089 ಕೋಟಿ ಬಾಕಿ ಇದೆ. ಈ ರೀತಿ ಪ್ರತಿ ವಲಯದಲ್ಲೂ ಕೋಟಿ ಕೋಟಿ ಬಾಕಿ ಉಳಿಸಿಕೊಂಡಿರುವ ತೆರಿಗೆದಾರರ ಪಟ್ಟಿಯನ್ನ ಪಾಲಿಕೆ ಬಿಡುಗಡೆ ಮಾಡಿದ್ದು, ವಸೂಲಿ ಮಾಡೋದು ಯಾವಾಗ ಅನ್ನೋದನ್ನ ಕಾದು ನೋಡಬೇಕಿದೆ.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?