ಈ ಬ್ರಹ್ಮಾಂಡದಲ್ಲಿ ಹುಟ್ಟುವ ಪ್ರತಿಯೊಂದು ಜೀವರಾಶಿಯು ಹಲವಾರು ಸಾಧನೆಗಳನ್ನು ಮಾಡುತ್ತಾ ತವಳುತ್ತಾ ದುರ್ಗಮವಾದ ಕ್ಷಣಗಳನ್ನು ಪೂರೈಸುತ್ತಾ ಪೂರ್ವಾರ್ಜಿತ ಕರ್ಮಗಳ ಫಲಗಳ ರೂಪದಲ್ಲಿ ಬಂದಂತಹ ಜೀವನವನ್ನು ಎಷ್ಟೋ ವರ್ಷಗಳ ಕಾಲ ಕ್ರಮಿಸಿ ನಂತರ ಅತ್ಯಂತ ಶ್ರೇಷ್ಠ ವಾದ ಮಾನವ ಜನ್ಮಕ್ಕೆ ಬಂದು ನಿಲ್ಲುತ್ತಾನೆ .
ಜನ್ಮದ ಆರಂಭದಿಂದ ಮೊದಲುಗೊಂಡು ಭಗವದನುಗ್ರಹದಿಂದ ಹಾಗೂ ಕಾಲ ಯೋಗ ಸಂಯೋಗದಿಂದ ಪೂರ್ವಾರ್ಜಿತ ಕರ್ಮಗಳ ಫಲದಿಂದ ಉತ್ತಮವಾದ ತಂದೆ ತಾಯಿಗಳು ಪ್ರಾಪ್ತವಾಗಿ ಅವರಿಂದ ಯೋಗ್ಯವಾದ ಶಿಕ್ಷಣವನ್ನು ಪಡೆದು ಸನ್ಮಾರ್ಗವನ್ನು ಹಾಗೂ ಜ್ಞಾನದ ಪ್ರಮುಖ ತಳಹದಿಯನ್ನು ನಿರ್ಮಿಸಿ ಕೊಂಡು ನಂತರ ವ್ಯಾವಹಾರಿಕ ಶಿಕ್ಷಣದತ್ತ ಮುಖ ಮಾಡಿ ಜೊತೆಗೆ ನಿತ್ಯ ಅನುಷ್ಠಾನಗಳನ್ನು ಎಡೆಬಿಡದೆ ಮಾಡುತ್ತಾ ಶ್ರೇಷ್ಠವಾದ ಜೀವನದ ಗುರಿಯನ್ನು ಮುಕ್ತಿಯ ಪಥ ದತ್ತ ಕೊಂಡೊಯ್ಯುವ ಗುರುಗಳ ದಿವ್ಯ ಮಾರ್ಗದರ್ಶನದಿಂದ ಜೀವನವನ್ನು ಅತ್ಯಂತ ಸುಲಲಿತವಾಗಿ ಧರ್ಮ ಮಾರ್ಗವಾಗಿ ಸತ್ಯಯುತವಾದ ಹಾಗೂ ಭಗವದ್ಭಕ್ತಿಯಲ್ಲಿ ಸ್ಥಿರವಾದ ಚಿತ್ತವನ್ನು ಇರಿಸಿ ಗುರುಗಳು ತಿಳಿಸಿದ ಮಾರ್ಗದಲ್ಲಿ ನಿರಾತಂಕವಾದ ಜೀವನವನ್ನು ನಡೆಸಿ ಕೊನೆಗೆ ನಿತ್ಯ ಅನುಷ್ಠಾನದಲ್ಲಿ ಭಗವಂತನ ಪಾದಪದ್ಮಗಳಲ್ಲಿ ಸಂಪೂರ್ಣ ಸ್ಥಿರವಾದ ಮನಸ್ಸನ್ನು ನಿಲ್ಲಿಸಿ ಪ್ರಕರಣವಾದ ಬೆಳಕನ್ನೇ ಆಶ್ರಯಿಸುತ್ತ ಜೀವನವನ್ನು ಸಾರ್ಥಕ ಪಡಿಸಿಕೊಂಡು ಹರಿದು ಹೋದ ಸಾಧನೆಗೆ ಅವಶ್ಯವಲ್ಲದ ಜೀರ್ಣವಾದ ಈ ದೇಹವನ್ನು ಬಿಡುವುದಕ್ಕೆ ಸರ್ವತ್ರ ವ್ಯವಸ್ತೆ ಮಾಡಿಕೊಂಡು ಹಂಸ ಸ್ವರೂಪನಾದ ಪರಬ್ರಹ್ಮನನ್ನು ಹೊಂದಬೇಕು.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?