ಶಿವಮೊಗ್ಗ: ಜಿಲ್ಲೆಯ ಪ್ರತಿಷ್ಠಿತ ಗಣಪತಿ ಉತ್ಸವ ರಿಪ್ಪನ್ಪೇಟೆಯ ಸಿದ್ದಿವಿನಾಯಕ ಮೆರವಣಿಗೆ ಹಾಗೂ ವಿಸರ್ಜನೆ. ಯಾವಾಗಲೂ ಶಾಂತಿ ಕಾಪಾಡಲು ಅತೀ ಹೆಚ್ಚು ಪೊಲೀಸರನ್ನ ನಿಯೋಜನೆ ಮಾಡಲಾಗುತ್ತೆ. ಇಂತಹದರ ಮಧ್ಯೆಯೂ ಕಿಡಿಗೇಡಿಗಳು ಕಿರಿಕ್ ಮಾಡಿದ್ದಾರೆ.
ಆಟೋ ಚಾಲಕ ಧನು, ಸುಜಿತ್ ಹಾಗೂ ಜೋಸೆಫ್ ಎಂಬುವರು ಗಣಪತಿ ಮೆರವಣಿಗೆಯಲ್ಲಿ ಗಣಪತಿ ಸಮಿತಿ ಸದಸ್ಯರಾದ ಸೂರ್ಯ ಹಾಗೂ ಕುಮಾರ್ರಿಗೆ ಚಾಕುವಿನಿಂದ ಇರಿದಿದ್ದಾರೆ, ಗಾಯಗೊಂಡವರಿಬ್ಬರೂ ಜಿಲ್ಲಾಸ್ಪತ್ರೆ ಮೆಗ್ಗಾನ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎಲ್ಲರೂ ಇಪ್ಪತ್ತೆರಡು – ಇಪ್ಪತ್ಮೂರು ವರ್ಷದ ಆಸುಪಾಸಿನವರಾಗಿದ್ದು ಆರೋಪಿಗಳಿಬ್ಬರು ಸಿಕ್ಕಿದ್ದಾರೆ, ಜೋಸೆಫ್ ತಲೆಮರೆಸಿಕೊಂಡಿದ್ದಾನೆಂದು ರಿಪ್ಪನ್ಪೇಟೆ ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ ಇದು ಹಳೇ ವೈಷಮ್ಯ ಆದರೆ ಗಾಯಗೊಂಡಿರುವವರ ಸಂಬಂಧಿಕರು ಆರೋಪಿಗಳು ಮೆರವಣಿಗೆ ಮಧ್ಯೆ ಹೆಣ್ಣುಮಕ್ಕಳ ಡಾನ್ಸ್ನಲ್ಲಿ ನುಸುಳಿದ್ದರು, ಇದನ್ನ ಪ್ರಶ್ನಿಸಿದ್ದಕ್ಕೆ ಈ ಕೃತ್ಯ ನಡೆದಿದೆ ಎಂದು ಆರೋಪಿಸುತ್ತಾರೆ.
ಕೊರೊನಾ ಸೋಂಕಿಗೆ ಸ್ವಾಮೀಜಿ ಬಲಿ – ದೈವಾದೀನರಾದ ಹೊನ್ನಾಳಿ ರಾಂಪುರ ಹಾಲುಸ್ವಾಮಿ ಮಠದ ಶ್ರೀಗಳು
ಕೊರೊನಾಕ್ಕೆ ಮದ್ದು ಅರೆದ ಈಶ್ವರಪ್ಪ- ಮಲೆನಾಡಿನಲ್ಲಿ ಕೋವಿಡ್ ಕಡಿವಾಣಕ್ಕೆ ಹೊಸ ಸೂತ್ರ..!
ಬೆಳಗ್ಗೆ 10 ಗಂಟೆವರೆಗೂ ಮನೆಯಿಂದ ಹೊರ ಬರ್ಬೇಡಿ..! ಸಂಜೆ 6 ಗಂಟೆಯೊಳಗೆ ಮನೆ ಸೇರ್ಕೊಂಡುಬಿಡಿ..! – ಇಲ್ಲಾಂದ್ರೆ, ಅಷ್ಟೆ ನಿಮ್ ಕಥೆ..!
ನರಸೀಪುರದ ಕ್ಯಾನ್ಸರ್ ವೈದ್ಯ ದೈವಾಧೀನ- “ಸಣ್ಣಯ್ಯ”ಅಜ್ಜನಿಗೆ ಶ್ರದ್ಧಾಂಜಲಿ
ಕನ್ನಡ ಮಾತೃಭಾಷೆ ಆದರೆ ಹಿಂದಿ ಮಾತೃ : ಕೆಎಸ್ ಈಶ್ವರಪ್ಪ
ಸಿದ್ದರಾಮಯ್ಯ ವಡ್ಡ, ಮತ್ತೆ ನಾಲಗೆ ಹರಿಬಿಟ್ಟ ಈಶ್ವರಪ್ಪ..!