ಬೆಂಗಳೂರು: ಕಾಂಗ್ರೆಸ್ ಹಾಗೂ ಜೆಡಿಎಸ್ ಗುದ್ದಾಟ ಬಗೆಹರಿಯುವಂತೆ ಕಾಣುತ್ತಿಲ್ಲ, ಎರಡು ದಿನದ ಹಿಂದೆ ಆಂಗ್ಲ ಪತ್ರಿಕೆಗೆ ಹೇಳಿಕೆ ನೀಡಿ ಸಿದ್ದರಾಮಯ್ಯ ದೋಸ್ತಿಗೆ ಮುಳುವಾಗಿದ್ದರು, ಕಾಂಗ್ರೆಸ್ ಕೂಡ ಬೆಜೆಪಿಗೆ ಅಧಿಕಾರ ಹಸ್ತಾಂತರಕ್ಕೆ ಸಿದ್ಧವಾಗಿತ್ತು ಎಂದು ಕಾಂಗ್ರೆಸ್ ನಾಯಕರನ್ನ ಕೆರಳಿಸಿದ್ದ ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ ಪುನಃ ಕೈ ನಾಯಕರ ವಿರುದ್ಧ ಗುಡುಗಿದ್ದಾರೆ.
ಕಾಂಗ್ರೆಸ್ ಕೊಟ್ಟ ಹಿಂಸೆಗೆ ನನ್ನ ಮಗ ಕುಮಾರಸ್ವಾಮಿ ಕಣ್ಣೀರಿಡ್ತಿದ್ರು, ರಾಜೀನಾಮೆ ಕೊಡ್ತೀನಿ ಅಂತ ನನ್ನ ಬಳಿ ಹೇಳಿದ್ದರು, ಸರ್ಕಾರ ಬೀಳಿಸಿದ್ರೆ ನಮ್ಮ ಮೇಲೆ ಆರೋಪ ಬರುತ್ತೆ ಅಂತ ನಾನೂ ಸುಮ್ಮನೆ ಇದ್ದೆ, ಆದರೆ ಈಗ ಸರ್ಕಾರ ಬಿದ್ದು ಹೋಗಿದೆ, ಇದೆಲ್ಲವನ್ನು ಹೇಳ್ತಿದ್ದೇನೆ ಎಂದರು.
ನಾನು ಕೂಡ ಕೈ ನಾಯಕರ ಕಾಟಕ್ಕೆ ಪ್ರತಿದಿನ ನೋವು ಸಹಿಸಿಕೊಂಡೇ ಇದ್ದೆ, ನಾನೇ ಸರ್ಕಾರ ತೆಗೆದಿದ್ರೆ ನನ್ನ ಮೇಲೆ ಗೂಬೆ ಕೂರಿಸ್ತಿದ್ರು, ಪ್ರಾದೇಶಿಕ ಪಕ್ಷವಾಗಿ ನಾವೇ ಹೊರ ಬಂದಿದ್ರೆ ತಪ್ಪು ಸಂದೇಶ ಹೋಗುತ್ತೆ, ಹಾಗಾಗಿ ನಾನೇ ಕುಮಾರಸ್ವಾಮಿಗೆ ಎಲ್ಲವನ್ನೂ ಸಹಿಸಿಕೊಂಡು ಮುಂದುವರಿಯುವಂತೆ ಹೇಳಿದ್ದೆ, ಮಾಧ್ಯಮಗಳ ಹಿಂಸೆಯಿಂದಲೂ ಕುಮಾರಸ್ವಾಮಿ ನಲುಗಿದ್ರು ಎಂದು ಎಚ್ ಡಿ ದೇವೇಗೌಡ ಆರೋಪ ಮಾಡಿದ್ದಾರೆ.
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಕೆ. ಸುಧಾಕರ್ ಅವರ ಪ್ರವಾಸದ ವಿವರ ಏಪ್ರಿಲ್ 16, 2024
50 ವರ್ಷ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲ್ಲ: ಚಿಕ್ಕಬಳ್ಳಾಪುರ ಎನ್ಡಿಎ ಅಭ್ಯರ್ಥಿ ಡಾ.ಕೆ.ಸುಧಾಕರ್
ನಿರ್ಧರಿಸಿದೆ ದೊಡ್ಡಬಳ್ಳಾಪುರ ಮತ್ತೊಮ್ಮೆ ಮೋದಿ ಸರ್ಕಾರ
ಮಂಡ್ಯ ಕ್ಷೇತ್ರಕ್ಕೆ ಕುಮಾರಸ್ವಾಮಿಯೇ ಅಭ್ಯರ್ಥಿ..! ಪುಟ್ಟರಾಜು ಘೋಷಣೆ..!
ಮಂಡ್ಯದಲ್ಲಿ ಚಂದ್ರುಗೆ ಸ್ಟಾರ್: ಮೈತ್ರಿ ಬಿಕ್ಕಟ್ಟಲ್ಲಿ ಗೆದ್ದು ಬೀಗ್ತಾರಾ.!
ಆರೋಗ್ಯ ಸುಧಾರಣೆ ಮಾವಿನಕೆರೆ ರಂಗನಾಥನಿಗೆ ಹರಕೆ ತೀರಿಸಿದ ದೇವೇಗೌಡರು