ರೈಸಿಂಗ್ ಕನ್ನಡ :
ರಾಮನಗರ :
ಖಾಸಗಿ ಸ್ಥಳದಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಶಾಲೆಯೊಂದರ ಜಾಗವನ್ನ ಮೂಲ ಮಾಲೀಕನಿಗೆ ಬಿಟ್ಟುಕೊಡುವಂತೆ ನ್ಯಾಯಾಲಯ ಆದೇಶ ನೀಡಿದೆ. ಇದರಿಂದ ಈ ಶಾಲೆಯಲ್ಲಿ ಓದುತ್ತಿರುವ ಸಾವಿರಾರು ಮಕ್ಕಳು ಬೀದಿಗೆ ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ.
ಸಂಕಷ್ಟದಲ್ಲಿ ಸಾವಿರಾರು ವಿದ್ಯಾರ್ಥಿಗಳು
ಹೌದು ಇದು ರಾಮನಗರ ಜಿಲ್ಲೆ ಮಾಗಡಿ ಪಟ್ಟಣದ ಪ್ರತಿಷ್ಠಿತ ಖಾಸಗಿ ವಿದ್ಯಾಮಂದಿರ. ಸಾವಿರಾರು ವಿದ್ಯಾರ್ಥಿಗಳು ಈ ಶಾಲೆಯಲ್ಲಿ ಕಲಿಯುತ್ತಿದ್ದಾರೆ. ಸುಮಾರು ವರ್ಷಗಳಿಂದ ಈ ಸ್ಥಳದಲ್ಲಿ ಶಾಲೆ ನಡೆಸಲಾಗುತ್ತಿದ್ದು, ಈಗ ವಿದ್ಯಾರ್ಥಿಗಳು ಅತಂತ್ರದಲ್ಲಿ ಸಿಲುಕಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಾರಣ ಜಾಗದ ಸಮಸ್ಯೆ.
ಹೌದು ಮಾಗಡಿ ಪಟ್ಟಣದಲ್ಲಿ 2.17 ಎಕರೆ ಜಮೀನು ಇದೆ. ಈ ಹಿಂದೆ ಜಯಮ್ಮ ಎಂಬುವವರು ಎಜ್ಯುಕೇಷನ್ ಟ್ರಸ್ಟ್ ಗೆ 1.30 ಎಕರೆ ಜಾಗವನ್ನ ಮಾರಾಟ ಮಾಡಿದ್ದರು. ಆದರೆ ಪಿತ್ರಾರ್ಜಿತ ಸ್ವತ್ತಿನಲ್ಲಿ ನಮಗೂ ಪಾಲು ಬರಬೇಕೆಂದು ಶಾಲೆಯ ಆಡಳಿತ ಮಂಡಳಿ ವಿರುದ್ಧ ಮಾಗಡಿ ನ್ಯಾಯಾಲಯದಲ್ಲಿ ಕೇಸು ದಾಖಲಿಸಲಾಯಿತು. ವಾದ ಪ್ರತಿವಾದಗಳನ್ನ ಆಲಿಸಿದ ಕೋರ್ಟ್ ವಿದ್ಯಾ ಸಂಸ್ಥೆಗೆ ಕೇವಲ 23 ಗುಂಟೆ ಜಮೀನು ಸೇರಬೇಕು ಇರುವ 1.30 ಎಕರೆ ಜಾಗದಲ್ಲಿ ದೂರುದಾರರಾದ ಶಾರದಮ್ಮ ಹಾಗೂ ರೇವಮ್ಮ ಇಬ್ಬರಿಗೂ ಸರಿ ಸಮಾನವಾಗಿ ನೀಡುವಂತೆ ನ್ಯಾಯಾಲಯ ಆದೇಶ ನೀಡಿದೆ.
ಘನ ನ್ಯಾಯಾಲಯ ಮೂಲ ಮಾಲೀಕರ ಪರವಾಗಿ ತೀರ್ಪು ನೀಡಿರುವುದರಿಂದ ಎಜುಕೇಷನ್ ಟ್ರಸ್ಟ್ಗೆ ಕೇವಲ 23 ಗುಂಟೆ ಜಮೀನು ಮಾತ್ರ ಉಳಿದಿದೆ. ನಮ್ಮ ಜಾಗವನ್ನ ಬಿಟ್ಟುಕೊಡುವಂತೆ ಶಾಲೆಯ ಆಡಳಿತ ಮಂಡಳಿಯವರನ್ನ ಮಾಲೀಕರು ಕೇಳುತ್ತಿದ್ದಾರೆ.
ಸರ್ಕಾರಿ ನಿಯಮದ ಪ್ರಕಾರ ಗ್ರಾಮೀಣ ಪ್ರದೇಶದಲ್ಲಿ ಖಾಸಗಿ ಶಾಲೆ ನಿರ್ಮಾಣವಾಗ ಬೇಕಾದ್ರೆ ಕನಿಷ್ಟ ಎರಡು ಎಕರೆ ಜಮೀನು ಇರಬೇಕು. ಆದ್ರೆ 23 ಗುಂಟೆ ಜಾಗ ಮಾತ್ರ ಶಾಲೆಗೆ ಉಳಿದಿದೆ. ಈ ಸಂಬಂದ ಈಗಾಗಲೆ ಸ್ಥಳ ಪರಿಶೀಲನೆ ಕೂಡ ನಡೆಸಲಾಗಿದೆ. ಮಕ್ಕಳ ಭವಿಷ್ಯಕ್ಕೆ ತೊಂದರೆಯಾಗದಂತೆ ಸೂಕ್ತ ಕ್ರಮ ಜರುಗಿಸಲಾಗುವುದು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲೆಯ ಆಡಳಿತ ಮಂಡಳಿಗೆ ನೋಟೀಸ್ ಕೂಡ ನೀಡಲಾಗಿದೆ.
ಈ ಜಾಗವನ್ನ 1991 ರಲ್ಲಿ ಶಾಲೆಯ ಆಡಳಿತ ಮಂಡಳಿ ಹೆಸರಿನಲ್ಲಿ ತೆಗೆದುಕೊಂಡಿದ್ದೇವೆ. ನಾವು ಒತ್ತುವರಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನಲ್ಲಿ ಅರ್ಜಿ ಕೂಡ ಸಲ್ಲಿಸಲಾಗಿದೆ.
ಒಟ್ಟಾರೆ ಶಾಲೆಯ ಜಾಗದ ವಿಷಯಕ್ಕೆ ಮೂಲ ಮಾಲೀಕರು ಹಾಗೂ ಶಾಲೆಯ ಆಡಳಿತ ಮಂಡಳಿ ಹಗ್ಗ ಜಗ್ಗಾಟ ನಡೆಯುತ್ತಿದ್ದು, ಇದರಿಂದ ವಿದ್ಯಾರ್ಥಿಗಳ ಭವಿಷ್ಯ ಆತಂತ್ರದಲ್ಲಿದೆ.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?